Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮನೆ ಬೀಗ ಮುರಿದು ಆಭರಣ ಮತ್ತು ನಗದು ಕಳ್ಳತನ

07:57 PM Dec 02, 2023 IST | suddionenews
Advertisement

 

Advertisement

ಕುರುಗೋಡು. ಡಿ.2 : ಸಮೀಪದ ಮಣ್ಣೂರು- ಸೂಗೂರು ಗ್ರಾಮದ ಮಟ್ಟಿ ವ್ಯಾಪ್ತಿಯಲ್ಲಿನ ಸ್ಥಳೀಯ ಚಾಗಿ ವೀರೇಶ ಗೌಡ ಇವರ ಮನೆಯಲ್ಲಿ ತಡರಾತ್ರಿ ವೇಳೆಯಲ್ಲಿ ಕಳ್ಳತನ ನಡೆದಿದ್ದು, ಈ ಕುರಿತಂತೆ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲುಗೊಂಡಿದೆ.

ಶನಿವಾರ ಬೆಳಗಿನ ಜಾವ ಒಂದು ಗಂಟೆಯಿಂದ ನಾಲ್ಕು ಗಂಟೆಯ ಮಧ್ಯೆ ಘಟನೆ ಜರುಗಿದ್ದು, ಬೀಗ ಹಾಕಿದ ಮನೆಯ ಚಿಲಕವನ್ನು ಮುರಿದು ಗೋದ್ರೆಜ್ ತೆಗೆದು ಅದರಲ್ಲಿನ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು ಮತ್ತು ನಗದು ಹಣವನ್ನು ದೋಚಿದ್ದಾರೆ.

Advertisement

ಬಂಗಾರದ ಆಭರಣಗಳಾದ ಕತ್ತಿನ ಸರ, ನೆಕ್ಲೆಸ್, ಉಂಗುರಗಳು, ಎಳೆ ಸರಗಳು, ಕೈ ಚೈನಿಗಳು,ಕಿವಿಯ ಆಭರಣಗಳು, ಸರಗಳು ಸೇರಿದಂತೆ ಕಾಲು ಚೈನೆಗಳು ಹಾಗೂ ಇನ್ನಿತರ ಒಟ್ಟು 19 ತೊಲೆ ಬಂಗಾರ ಮತ್ತು ಹದಿನೈದು ತೊಲೆ ಬೆಳ್ಳಿ ಹಾಗೂ 4,80,000 ನಗದು ಹಣವನ್ನು ಕಳ್ಳರು ದೋಚಿದ್ದಾರೆ.

ಸುದ್ದಿ ತಿಳಿಯುತ್ತಲೇ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಶ್ವಾನದ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ, ಮಾಹಿತಿ ಸಂಗ್ರಹಿಸಿದ್ದಾರೆ.

ಈ ಸಂಬಂಧವಾಗಿ ಸಿರಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ

Advertisement
Tags :
ballarycashfeaturedhousejewelerystolensuddioneಆಭರಣಕಳ್ಳತನನಗದುಬಳ್ಳಾರಿಮನೆ ಬೀಗಸುದ್ದಿಒನ್
Advertisement
Next Article