Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಡೈಲಿ ವಿಷ ಕುಡಿಯುತ್ತಿದ್ದೀನಿ : ಮೈತ್ರಿ ಬಗ್ಗೆ ಇಬ್ರಾಹಿಂ ಮತ್ತೆ ಬೇಸರ..!

07:01 PM Oct 05, 2023 IST | suddionenews
Advertisement

 

Advertisement

 

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ‌ ಮಾಡಿಕೊಂಡಿರುವುದಕ್ಕೆ ಸಿ ಎಂ ಇಬ್ರಾಹಿಂ ಮತ್ತೆ ಬೇಸರ ಹೊರ ಹಾಕಿದ್ದಾರೆ. ಈ ಮೈತ್ರಿ ಬಗ್ಗೆ ನನಗ್ಯಾರು ಹೇಳಿಲ್ಲ. ಡೈಲಿ ವಿಷ ಕುಡಿದು ಬದುಕುತ್ತಿದ್ದೀನಿ ಎಂದು ಬೇಸರ ಹೊರ ಹಾಕಿದ್ದಾರೆ.

Advertisement

ಮೈತ್ರಿ ಜೆಡಿಎಸ್ ಗೆ ಬೇಕಿತ್ತಾ..? ಬಿಜೆಪಿಗೆ ಬೇಕಿತ್ತಾ..? ಯಾರ ಸಿದ್ಧಾಂತವನ್ನು ಯಾರೂ ಒಪ್ಪಿದ್ದಾರೆ..? ಇದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಮೈತ್ರಿಯಿಂದಾಗಿ ಹಲವು ಶಾಸಕರಿಗೆ ಅಸಮಾಧಾನವಾಗಿದೆ. ಇದರಿಂದ ಮತ್ತೊಮ್ಮೆ ಸಭೆ ಕರೆದು ಮೊದಲು ಚರ್ಚೆ ಮಾಡಿ. ಇದರಿಂದ ನಾನು ಡೈಲಿ ವಿಷ ಕುಡಿದಂತೆ ಆಗುತ್ತಿದೆ‌ ಎಂದಿದ್ದಾರೆ.

ಇನ್ನು ಮೈತ್ರಿಯಿಂದಾಗಿ ಜೆಡಿಎಸ್ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹನೂರ್ ಮಂಜುನಾಥ್ ಜೆಡಿಎಸ್ ತೊರೆಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗುತ್ತಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಹನೂರು ಮಂಜುನಾಥ್ ಭೇಟಿ ಮಾಡಿರುವುದೇ ಈ ಚರ್ಚೆಯ ವಿಚಾರಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದು ಹಲವರಿಗೆ ಸಮಾಧಾನವಾಗಿಲ್ಲ. ಹೀಗಾಗಿ ನೇರವಾಗಿಯೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈ ಮೈತ್ರಿಯನ್ನು ಒಪ್ಪಬೇಕೋ ಬೇಡವೋ ಎಂಬ ಗೊಂದಲವೇ ಹಲವರಲ್ಲಿದೆ. ಅಷ್ಟೇ ಅಲ್ಲ ಈ ಮೈತ್ರಿಗೆ ಜೆಡಿಎಸ್ ರಾಜ್ಯಾಧ್ಯಕ್ಷೃಎ ಒಪ್ಪಿಗೆ ಸೂಚಿಸದೆ ಇರುವುದು ಎಲ್ಲರ ಗಮನ ಸೆಳೆದಿದೆ.

Advertisement
Tags :
alliancebengalurucm IbrahimDailyfeaturedpoisonsuddioneಬೆಂಗಳೂರುಬೇಸರಸಿ ಎಂ ಇಬ್ರಾಹಿಂಸುದ್ದಿಒನ್
Advertisement
Next Article