Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೆಂಗಳೂರಿಗೆ ಬಂದ ದೊಡ್ಮನೆ ಸೊಸೆ : ನಾಳೆ ಯುವ - ಶ್ರೀದೇವಿ ಡಿವೋರ್ಸ್ ಕೇಸ್ ವಿಚಾರಣೆ..!

09:47 PM Jul 03, 2024 IST | suddionenews
Advertisement

ಬೆಂಗಳೂರು: ದೊಡ್ಮನೆ ಮೊಮ್ಮಗ ಯುವ ರಾಜ್‍ಕುಮಾರ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಜೋರು ಚರ್ಚೆಯೂ ಆಗಿತ್ತು. ವಿದೇಶದಲ್ಲಿದ್ದ ಶ್ರೀದೇವಿ ಭೈರಪ್ಪ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಾಳೆ ಫ್ಯಾಮಿಲಿ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಶ್ರೀದೇವಿ ಭೈರಪ್ಪ ಕೂಡ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

Advertisement

ನಾಳಿನ ವಿಚಾರಣೆ ವಿಚ್ಛೇದನ ಕೇಸ್ ಗೆ ನಿರ್ಣಾಯಕ ದಿನವಾಗಿದೆ. ಯುವ ರಾಜ್‍ಕುಮಾರ್ ವಿಚ್ಚೇದನ ಕೋರಿ ಜೂನ್ 6 ರಂದು ಅರ್ಜಿ ಸಲ್ಲಿಕೆ ಮಾಡಿದ್ದರು. ಅಂದು ವಿಚಾರಣೆ ನಡೆಸಿದ್ದ ಫ್ಯಾಮಿಲಿ ಕೋರ್ಟ್ ಜುಲೈ 4ಕ್ಕೆ ಮುಂದೂಡಿಕೆ ಮಾಡಿತ್ತು. ಹೀಗಾಗಿ ನಾಳೆ ಫ್ಯಾಮಿಲಿ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಶ್ರೀದೇವಿ ಕೂಡ ಅಮೆರಿಕಾದಿಂದ ಬೆಂಗಳೂರಿಗೆ ಬಂದಿದ್ದು, ವಿಚಾರಣೆಗೆ ಹಾಜರಾಗುತ್ತಾರೆ ಎಂದೇ ಹೇಳಲಾಗುತ್ತಿದೆ.

ಯುವ ರಾಜ್‍ಕುಮಾರ್ ದಾಂಪತ್ಯ ಜೀವನದ ಬಿರುಕು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶ್ರೀದೇವಿ ಹಾಗೂ ಯುವ ಇಬ್ಬರು ಪ್ರೀತಿಸಿ ಮದುವೆಯಾಗಿದ್ದವರು. ಆದರೆ ಯುವ ಮೊದಲ ಸಿನಿಮಾದ ಸಮಯದಲ್ಲಿಯೂ ಶ್ರೀದೇವಿ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ವಿದೇಶದಲ್ಲಿ ಓದುವುದಕ್ಕೆ ಹೋಗಿದ್ದಾರೆ ಎಂದೇ ಎಲ್ಲರೂ ಭಾವಿಸಿ ಸುಮ್ಮನೆ ಆಗಿದ್ದರು. ಆದರೆ ಡಿವೋರ್ಸ್ ಕೇಸ್ ಹೊರಗೆ ಬಂದೊಡನೆ ದೊಡ್ಡ ಶಾಕ್ ಆಗಿತ್ತು. ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ಒಬ್ಬರಿಗೊಬ್ಬರು ಆರೋಪ ಮಾಡುವುದರಲ್ಲಿ ಮುಳುಗಿದರು. ಯುವ ರಾಜ್‍ಕುಮಾರ್ ಕಡರಯ ವಕೀಲರು ಶ್ರೀದೇವಿ ಅವರ ನಡವಳಿಕೆ ಬಗ್ಗೆ ಮಾತನಾಡಿದರೆ , ಶ್ರೀದೇವಿ ಬಹಿರಂಗವಾಗಿಯೇ ಪೋಸ್ಟ್ ಒಂದನ್ನು ಹಾಕಿದ್ದರು. ಸಹ ನಟಿಯ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರಿಂದ ನಾನು ದೂರಾದೆ ಎಂದಿದ್ದರು. ಇದರ ನಡುವೆ ಸಪ್ತಮಿ ಗೌಡ ಆಡಿಯೋ ಬೇರೆ ವೈರಲ್ ಆಗಿತ್ತು.

Advertisement

Advertisement
Tags :
bangaloredivorce caseDodmanehearing tomorrowYuva - Srideviಡಿವೋರ್ಸ್ ಕೇಸ್ದೊಡ್ಮನೆ ಸೊಸೆಬೆಂಗಳೂರುಯುವ - ಶ್ರೀದೇವಿವಿಚಾರಣೆ
Advertisement
Next Article