For the best experience, open
https://m.suddione.com
on your mobile browser.
Advertisement

ದರ್ಶನ್ ಹೆಲ್ತ್ ಚೆಕಪ್ ಗೆ ಬಳ್ಳಾರಿ ಜೈಲಿಗೆ ಬಂದ ವೈದ್ಯರು..!

01:13 PM Oct 09, 2024 IST | suddionenews
ದರ್ಶನ್ ಹೆಲ್ತ್ ಚೆಕಪ್ ಗೆ ಬಳ್ಳಾರಿ ಜೈಲಿಗೆ ಬಂದ ವೈದ್ಯರು
Advertisement

ಬಳ್ಳಾರಿ: ನಟ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿನಲ್ಲಿ ಕೂತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್ ಗೆ ಅಲ್ಲಿ ಹೊಂದಿಕೊಳ್ಳುವುದು ಬಹಳಷ್ಟು ಸಂಕಟದ ವಿಚಾರವಾಗಿದೆ. ಬೆನ್ನು ನೋವಿನಿಂದಾನೂ ಬಳಲುತ್ತಿದ್ದಾರೆ. ಇದರ ನಡುವೆ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆಯೂ ನಡೆಯುತ್ತಿದೆ. ಇದೀಗ ಬಳ್ಳಾರಿ ಜೈಲಿಗೆ ದರ್ಶನ್ ಸೇರಿದಂತೆ ಎಲ್ಲಾ ಕೈದಿಗಳ ಆರೋಗ್ಯ ತಪಾಸಣೆಗಾಗಿ ವೈದ್ಯರು ಬಂದಿದ್ದಾರೆ.

Advertisement
Advertisement

ಐದು ಜನ ವೈದ್ಯರು ಬಂದಿದ್ರು, ಕೈದಿಗಳ ತಪಾಸಣೆಗೆ ಏನೆಲ್ಲಾ ಬೇಕೋ ಆ ಎಲ್ಲಾ ಅಗತ್ಯ ಮೆಡಿಕಲ್ ಕಿಟ್ ಅನ್ನು ತಂದಿದ್ದಾರೆ. ಜೈಲಿನಲ್ಲಿರು ಕೈದಿಗಳ ಆರೋಗ್ಯದ ಬಗ್ಗೆ ಜೈಲು ಅಧಿಕಾರಿಗಳು ಗಮನ ಹರಿಸುತ್ತಾರೆ. ಆಗಾಗ ವೈದ್ಯರು ಬಂದು ತಪಾಸಣೆ ನಡೆಸಿ, ಬೇಕಾದ ಔಷಧಗಳನ್ನು ನೀಡುತ್ತಾರೆ. ಇದೀಗ ಇಂದು ವೈದ್ಯರು ಭೇಟಿ ನೀಡಿದ್ದಾರೆ.

ದರ್ಶನ್ ಅವರು ಬಳ್ಳಾರಿ ಜೈಲಿಗೆ ಬಂದಾಗಿನಿಂದ ತಮಗೆ ಬೇಕಾದ ಮೆಡಿಕಲ್ ವಸ್ತುಗಳನ್ನು ಮನವಿ ಮಾಡಿ ಈಗಾಗಲೇ ತರಿಸಿಕೊಂಡಿದ್ದಾರೆ. ಆದರೆ ಬೆನ್ನು ನೋವಿಗೆ ಸ್ಕ್ಯಾನಿಂಗ್ ಮಾಡಿಸುವುದಕ್ಕೆ ಮಾತ್ರ ಒಪ್ಪುತ್ತಿಲ್ಲ. ಬೆಂಗಳೂರಿನಲ್ಲಿಯೇ ಮಾಡಿಸುತ್ತೇನೆ ಎಂದು ಹಠ ಮಾಡಿದ್ದಾರೆ. ಪೇನ್ ಕಿಲ್ಲರ್ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ದರ್ಶನ್ ಕುಟುಂಬಸ್ಥರು ಕೂಡ ಆಗಾಗ ಬಳ್ಳಾರಿ ಜೈಲಿಗೆ ಬಂದು ದರ್ಶನ್ ಅವರನ್ನು ನೋಡಿಕೊಂಡು ಹೋಗುತ್ತಿದ್ದಾರೆ. ದರ್ಶನ್ ಅವರಿಗೆ ಅವರ ಪತ್ನಿ ವಿಜಯಲಕ್ಷ್ಮೀ ಸಾಕಷ್ಟು ಧೈರ್ಯ ತುಂಬುತ್ತಿದ್ದಾರೆ. ಜಾಮೀನು ಸಿಗುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ದರ್ಶನ್ ಪರ ವಕೀಲರು ಹಾಗೂ ಸರ್ಕಾರಿ ವಕೀಲರ ವಾದ ಪ್ರತಿವಾದ ನಡೆಯುತ್ತಿದೆ.

Advertisement
Advertisement

Advertisement
Tags :
Advertisement