Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೊಲೆ ಮಾಡಲು ಬಂದು ತಾನೇ ಕೊಲೆಯಾದನಾ ಮೆಂಟಲ್ ಮಂಜ : ತನಿಖೆ ವೇಳೆ ಭಯಾನಕ ವಿಚಾರ ಬೆಳಕಿಗೆ

12:18 PM Feb 25, 2024 IST | suddionenews
Advertisement

ಬೆಂಗಳೂರು: ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಮೆಂಟಲ್ ಮಂಜನ ಕೊಲೆಯಾಗಿದೆ. ನಿನ್ನೆ ಆನೇಕಲ್ ನ ವೀವರ್ಸ್ ಕಾಲೋನಿಯಲ್ಲಿ ನಡೆದ ಘಟನೆಯಲ್ಲಿ ಮೆಂಟಲ್ ಮಂಜನ ಕೊಲೆಯಾಗಿದ್ದು, ಟ್ಯಾಟೂ ವಿಜಿ ಮತ್ತು ಸ್ನೇಹಿತರನ್ನು ಅರೆಸ್ಟ್ ಮಾಡಲಾಗಿದೆ. ತನಿಖೆ ನಡೆಸಲಾಗುತ್ತಿದ್ದು, ಒಂದೊಂದೆ ವಿಚಾರಗಳು ಬಯಲಿಗೆ ಬಂದಿದೆ.

Advertisement

ಗುಂಪಿ ಕಟ್ಟಿಕೊಂಡು ಬಂದಿದ್ದ ಮೆಂಟಲ್ ಮಂಜ, ಟ್ಯಾಟೂ ವಿಜಿಯ ಜೊತೆಗೆ ಗಲಾಟೆಗೆ ನಿಂತಿದ್ದ. ಮಾರಾಕಾಸ್ತ್ರಗಳನ್ನು ತೋರಿಸಿ, ಜಗಳ ಮಾಡಿ, ಹಲ್ಲೆ ಮಾಡಿದ್ದಾನೆ. ಈ ಜಗಳ ಜೋರಾದ ಹಿನ್ನೆಲೆ ಟ್ಯಾಟೂ ವಿಜಿ ತಕ್ಷಣ ತನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಸ್ಥಳಕ್ಕೆ ಬಂದ ಸ್ನೇಹಿತರು, ಮಂಜನಿಗೆ ಬುದ್ದಿ‌ ಹೇಳುವುದಕ್ಕೆ ಪ್ರಯತ್ನ ಮಾಡಿದ್ದಾರೆ. ಆದರೆ ಮಂಜ ಮೊದಲೇ ಫಿಕ್ಸ್ ಆಗಿದ್ದ ಎಂಬಂತೆ ಕಾಣುತ್ತದೆ. ಯಾರ ಮಾತು ಕೇಳದೆ ಹಲ್ಲೆಗೆ ಮುಂದಾಗಿದ್ದಾನೆ.

 

Advertisement

ಆದರೆ ವಿಜಿ ಹಾಗೂ ಸ್ನೇಹಿತರು ಮಂಜನ ಬಳಿಯಿದ್ದ ಮಾರಕಾಸ್ತ್ರದಿಂದಾನೆ ಮಂಜನ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆಯ ವಿಚಾರ ಅರಿತ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಅಲ್ಲಿಂದ ಮಂಜ ತಪ್ಪಿಸಿಕೊಂಡು ಆನೇಕಲ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪೊಲೀಸರು ಸ್ಥಳದಲ್ಲೆ ಇದ್ದ ಟ್ಯಾಟೂ ವಿಜಿ ಹಾಗೂ ಸ್ನೇಹಿತರನ್ನು ಅರೆಸ್ಟ್ ಮಾಡಿದ್ದಾರೆ. ಅತ್ತ ಮೆಂಟಲ್ ಮಂಜ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕೊಲೆಯಾದ ಮಂಜನ ಮೇಲೆ ಎಂಟಕ್ಕೂ ಹೆಚ್ಚು ಪ್ರಕರಣಗಳು ಇವೆ. ಮರ್ಡರ್, ರಾಬರಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮಂಜನ ಹೆಸರು ಇದೆ. ಮೊನ್ನೆ ಕೂಡ ಅವನ ಮೇಲೆ 110 ಅಡಿ ಕೇಸ್ ದಾಖಲಾಗಿದೆ.‌

Advertisement
Tags :
bangaloreDuring the investigationMental ManjaMental manjuterrible storyಕೊಲೆತನಿಖೆಬೆಂಗಳೂರುಮೆಂಟಲ್ ಮಂಜ
Advertisement
Next Article