For the best experience, open
https://m.suddione.com
on your mobile browser.
Advertisement

ಚನ್ನಪಟ್ಟಣ ಗೆಲುವಿನ ಶುಭ ಸೂಚನೆ ನೀಡಿದಳಾ ಹಾಸನಾಂಬೆ ತಾಯಿ : ಕುಮಾರಸ್ವಾಮಿ ದೇವರ ಮುಂದೆ ನಿಂತಾಗ ಆಗಿದ್ದೇನು..?

08:41 PM Oct 27, 2024 IST | suddionenews
ಚನ್ನಪಟ್ಟಣ ಗೆಲುವಿನ ಶುಭ ಸೂಚನೆ ನೀಡಿದಳಾ ಹಾಸನಾಂಬೆ ತಾಯಿ   ಕುಮಾರಸ್ವಾಮಿ ದೇವರ ಮುಂದೆ ನಿಂತಾಗ ಆಗಿದ್ದೇನು
Advertisement

ಹಾಸನ: ಈಗಾಗಲೇ ಹಾಸನಾಂಬೆಯ ದರ್ಶನ ಆರಂಭವಾಗಿದೆ. ಹತ್ತು ದಿನಗಳು ಮಾತ್ರ ತಾಯಿ ದರ್ಶನ ಭಾಗ್ಯಾ ಕೊಡುತ್ತಾಳೆ. ಈ ಹತ್ತು ದಿನಗಳ ಕಾಲ ರಾಜಕಾರಣಿಗಳು, ಸಾರ್ವಜನಿಕರು ಎಲ್ಲರೂ ದರ್ಶನ ಪಡೆಯಲು ಕ್ಯೂ ನಿಂತಿರುತ್ತಾರೆ. ಇಂದು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಕುಟುಂಬಸ್ಥರು ಕೂಡ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಈ ವೇಳೆ ತಾಯಿಯ ಆಶೀರ್ವಾದ ಸಿಕ್ಕಿದೆ ಎನ್ನಲಾಗಿದೆ. ಸಿದ್ದೇಶ್ವರ ಸ್ವಾಮಿಗಳು ಹೂ ನೀಡುವ ಮೂಲಕ ಶುಭ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಕುಮಾರಸ್ವಾಮಿ, ಪತ್ನಿ, ಸೊಸೆ,‌ ಮೊಮ್ಮಗನ ಜೊತೆಗೆ ಹಾಸನಾಂಬೆಯ ದರ್ಶನ ಮಾಡಿ ಬಳಿಕ ಸಿದ್ದೇಶ್ವರ ಸ್ವಾಮಿಗಳ ದರ್ಶನಕ್ಕೆ ಬಂದಿದ್ದರು. ಈ ವೇಳೆ ಪೂಜಾರಿಗಳು ಪೂಜೆ ಸಲ್ಲಿಸುವಾಗ ದೇವರು ಮೂರು ಹೂ ನೀಡಿದ್ದಾನೆ. ಇದನ್ನು ಕಂಡ ಅನಿತಾ ಕುಮಾರಸ್ವಾಮಿ ತುಂಬಾನೇ ಖುಷಿ ಪಟ್ಟಿದ್ದಾರೆ. ದೇವರ ಮೇಲಿಂದ ಅದರಲ್ಲೂ ಬಲಗಡೆ ಭಾಗದಿಂದ ಹೂ ಬಿದ್ದಿದೆ. ಇದನ್ಮು ಅನಿತಾ ಅವರು ನೋಡಿದ್ದು, ಕುಮಾರಸ್ವಾಮಿ ಅವರಿಗೂ ತೋರಿಸಿದ್ದಾರೆ. ಮಗನ ಗೆಲುವಿಗಾಗಿ ಬೇಡಿಕೊಳ್ಳುತ್ತಿದ್ದ ಕುಟುಂಬಕ್ಕೆ ದೇವರು ವರಕೊಟ್ಟಂತೆ ಆಗಿದೆ.

Advertisement

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗಟ್ಟಿ ನಿರ್ಧಾರ ಮಾಡಿ, ಬಿಜೆಪಿ ನಾಯಕರ ಜೊತೆಗೂ ಚರ್ಚಿಸಿ ನಿಖಿಲ್ ಕುಮಾರಸ್ವಾಮಿ ಅವರನ್ನು ಅಖಾಡಕ್ಕೆ ಇಳಿಸಿದ್ದಾರೆ. ಸಿಪಿ ಯೋಗೀಶ್ವರ್ ಎದುರು ನಿಖಿಲ್ ಹೋರಾಡಲೇಬೇಕಿದೆ. ಎರಡು ಬಾರಿ ಸೋತಿರುವ ನಿಖಿಲ್ ಮೂರನೆ ಬಾರಿಗೆ ಗೆಲ್ಲುವ ಎಲ್ಲಾ‌ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರ ಕುಟುಂಬ ಇಂದು ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ.

Advertisement

Advertisement
Advertisement
Tags :
Advertisement