For the best experience, open
https://m.suddione.com
on your mobile browser.
Advertisement

ಧ್ರುವ ಸರ್ಜಾ ಜಿಮ್ ಟ್ರೇನರ್ ಮೇಲೆ ಹಲ್ಲೆ : ಧ್ರುವ ಸರ್ಜಾ ಹೇಳಿದ್ದೇನು..?

03:30 PM May 27, 2024 IST | suddionenews
ಧ್ರುವ ಸರ್ಜಾ ಜಿಮ್ ಟ್ರೇನರ್ ಮೇಲೆ ಹಲ್ಲೆ   ಧ್ರುವ ಸರ್ಜಾ ಹೇಳಿದ್ದೇನು
Advertisement

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜಿಮ್ ಟ್ರೇನರ್ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಸದ್ಯ ಅವರನ್ನು ಧ್ರುವ ಸರ್ಜಾ ಮನೆಯ ಪಕ್ಕದ ಆಸ್ಪತ್ರೆಯಲ್ಲಿಯೇ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆ ಸ್ಟಾರ್ ವಾರ್ ಅಂತೆಲ್ಲಾ ಚರ್ಚೆಗೆ ಬರುತ್ತಿದೆ.

Advertisement

Advertisement

ಈ ಬಗ್ಗೆ ಅದಾಗಲೇ ಡಿಸಿಪಿ ಮಾಹಿತಿ ನೀಡಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ಈ ಬಗ್ಗೆ ಮಾಹಿತಿ ನೀಡಿದ್ದು, 32 ವರ್ಷದ ಯುವಕನ ಮೇಲೆ ಹಲ್ಲೆಯಾಗಿದೆ. ರಾತ್ರಿ 10.30ರ ಸುಮಾರಿಗೆ ಮನೆಗೆ ಹೋಗುವಾಗ ಹಲ್ಲೆ ನಡೆಸಿದ್ದಾರೆ. ಕೆ.ಆರ್‌.ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳು ಈ ಹಲ್ಲೆ ನಡೆಸಿದ್ದಾರೆ. ಸದ್ಯ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾರೆಂಬ ಮಾಹಿತಿಯೂ ಇಲ್ಲ. ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

Advertisement

Advertisement
Advertisement

ಈ ಸಂಬಂಧ ನಟ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಶಾಂತ್ ನಿನ್ನೆ ಬೆಳಗ್ಗೆಯಿಂದ ರಾತ್ರಿವರೆಗೂ ಇಲ್ಲೆ ಇದ್ದ. ಮೊನ್ನೆ ಮಂತ್ರಾಲಯಕ್ಕೂ ನಾನೇ ಕಳುಹಿಸಿದ್ದೆ. ಕಳೆದ ರಾತ್ರಿಯಷ್ಟೇ ನನ್ನ ಮನೆಯಿಂದ ಹೋಗಿದ್ದ. ತುಂಬಾ ವರ್ಷದಿಂದ ನನ್ನ ಜಿತೆಗೆ ಇದ್ದಾನೆ. ಮಾರ್ಗ ಮಧ್ಯೆ ಯಾರೋ ಹೊಡೆದಿದ್ದಾರೆ. ಅದು ಅವರ ಪರ್ಸನಲ್ ವಿಷಯ. ಅದು ನನಗೆ ಗೊತ್ತಿಲ್ಲ. ಫ್ಯಾಮಿಲಿ ಕಡೆಯಿಂದ ಕಂಪ್ಲೈಂಟ್ ಕೊಡಲಾಗಿದೆ. ತನಿಖೆಯನ್ನು ನಡೆಸುತ್ತಿದ್ದಾರೆ. ದಾಳಿ ಉದ್ದೇಶ ಗೊತ್ತಿಲ್ಲ. ಆದರೆ ಸತ್ಯ ಗೊತ್ತಾಗುತ್ತೆ. ಈ ಘಟನೆಯಲ್ಲಿ ಫ್ಯಾನ್ಸ್ ವಾರ್ ಅನ್ನೋದೆಲ್ಲ ಸುಳ್ಳು ಎಂದಿದ್ದಾರೆ.

ಇನ್ನು ಧ್ರುವ ಸರ್ಜಾ ಮ್ಯಾನೇಜರ್ ಈ ಘಟನೆ ಬಗ್ಗೆ ಮಾತನಾಡಿ, ಇದಕ್ಕೂ ಧ್ರುವ ಸರ್ಜಾಗೂ ಯಾವುದೇ ಸಂಬಂಧವಿಲ್ಲ. ಧ್ರುವ ಸರ್ಜಾಗೆ ಈ ಬಗ್ಗೆ ಮಾಹಿತಿ ಇಲ್ಲ. ಯಾವುದೋ ಖಾಸಗಿ ವಿಚಾರಕ್ಕೆ ಗಲಾಟೆಗಳಾಗಿದ್ದಾವೆ ಎಂದಿದ್ದಾರೆ.

Advertisement
Tags :
Advertisement