Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಗನನ್ನು ವಾಪಾಸ್ ಕೊಟ್ಟಿದ್ದಕ್ಕೆ ಚಿರ ಋಣಿ : ಪ್ರತಾಪ್ ತಾಯಿ ಕಣ್ಣೀರು

10:21 PM Jan 27, 2024 IST | suddionenews
Advertisement

ಇಂದು ಮತ್ತು ನಾಳೆ ಬಿಗ್ ಬಾಸ್ ಸೀಸನ್ 10 ಫಿನಾಲೆ ನಡೆಯುತ್ತಿದೆ. ನಾಳೆ ವಿನ್ನರ್ ಯಾರಾಗ್ತಾರೆ ಎಂಬ ಕುತೂಹಲ ಕರ್ನಾಟಕದ ಮಂದಿಯಲ್ಲಿ ಇದೆ. ಒಂದು ಹಂತದಲ್ಲಿ ಇವರೇ ಆಗಬಹುದು ಎಂದು ಲೆಕ್ಕಾಚಾರ ಹಾಕಿದರು ಕೂಡ, ಎಷ್ಟೋ ಸೀಸನ್ ನಲ್ಲಿ ಅದು ಉಲ್ಟಾ ಆಗಿದೆ. ಹೀಗಾಗಿ ನಾಳೆಯ ದಿನಕ್ಕಾಗಿಯೇ ಎಲ್ಲರೂ ಕಾಯುತ್ತಿದ್ದಾರೆ.

Advertisement

ಇಂದು ಫಿನಾಲೆಯ ವೇದಿಕೆಯಲ್ಲಿ ಎಲ್ಲಾ ಸ್ಪರ್ಧಿಗಳು ಕೂತಿದ್ದಾರೆ. ಒಳಗಿರುವ ಆರು ಸ್ಪರ್ಧಿಗಳ ಕುಟುಂಬಸ್ಥರು ಬಂದಿದ್ದಾರೆ. ಎಲ್ಲರಿಗೂ ಕುತೂಹಲ, ಟೆನ್ಶನ್ ಇದ್ದೆ ಇದೆ. ಇದೇ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಅವರ ತಾಯಿ ಕಣ್ಣೀರು ಹಾಕಿದ್ದಾರೆ. ಡ್ರೋನ್ ಪ್ರತಾಪ್ ಮೇಲೆ ಬಂದಂತ ಆರೋಪಗಳಿಂದಾಗಿ ಮನೆಯವರ ಸಂಪರ್ಕವೇ ಇರಲಿಲ್ಲ. ತಂದೆ-ತಾಯಿಯ ಜೊತೆಗೆ ಮಾತನಾಡಿಯೇ ಮೂರು ವರ್ಷಗಳಾಗಿತ್ತು. ಆದರೆ ಬಿಗ್ ಬಾಸ್ ವೇದಿಕೆ ಟ್ರೋಫಿ ಕೊಡುತ್ತೋ ಬಿಡುತ್ತೋ ಪ್ರತಾಪ್ ಗೆ ಹೊಸ ಜೀವನವನ್ನೇ ನೀಡಿದೆ. ತಂದೆ - ತಾಯಿಗೆ ಮತ್ತೆ ಹೊಸ ಮಗನನ್ನು ಕೊಟ್ಟಿದೆ. ಪ್ರತಾಪ್ ಪೋಷಕರನ್ನು ವಾಪಾಸ್ ಕೊಟ್ಟಿದೆ.

ಇದೇ ಸಂತಸ, ಇದೇ ಖುಷಿ ಪ್ರತಾಪ್ ತಾಯಿ ಮುಖದಲ್ಲೂ ಕಾಣುತ್ತಿದೆ. ಅದಕ್ಕೆ ಆನಂದ ಬಾಷ್ಪ ಸುರಿಸಿದ್ದಾರೆ. ಸುದೀಪ್ ಅವರಿಗೂ, ಬಿಗ್ ಬಾಸ್ ಗೂ ಧನ್ಯವಾದ ತಿಳಿಸಿದ್ದಾರೆ. 'ನಮ್ಮ ಮಗನನ್ನು ನಮಗೆ ವಾಪಸ್ ಕೊಟ್ಟಿದ್ದೀರಾ. ಈ ವೇದಿಕೆಗೆ ನಾವೂ ಸದಾ ಚಿರ ಋಣಿಗಳಾಗಿರುತ್ತೇವೆ' ಎಂದಿದ್ದಾರೆ.

Advertisement

 

ಪ್ರತಾಪ್ ಆರಂಭದಲ್ಲಿ ಅಸಮರ್ಥರಾಗಿ ಬಂದಿದ್ದರು. ಮನೆಗೆ ಬಂದಾಗಲಂತು ಮನೆಯವರ ಚುಚ್ಚು ಮಾತಿನಿಂದಾನೇ ನೊಂದು ಹೋಗಿದ್ದರು. ಕಿಚ್ಚ ಸುದೀಪ್ ಕೊಟ್ಟಂತಹ ಸ್ಪೂರ್ತಿದಾಯಕ ಮಾತಿಗಳು, ಧೈರ್ಯ ಪ್ರತಾಪ್ ಮುನ್ನುಗ್ಗುವಂತೆ ಮಾಡಿತ್ತು. ಇಂದು ಫಿನಾಲೆಯ ಹಂತಕ್ಕೆ ಮಾಡಿದೆ.

Advertisement
Tags :
bangaloreBigg boss kannadadrone pratapಡ್ರೋನ್ ಪ್ರತಾಪ್ಬಿಗ್ ಬಾಸ್ಬೆಂಗಳೂರು
Advertisement
Next Article