For the best experience, open
https://m.suddione.com
on your mobile browser.
Advertisement

ಬಳ್ಳಾರಿ ಜೈಲಿನಲ್ಲಿ ಕೊನೆಗೂ ದರ್ಶನ್ ಆಸೆ ಈಡೇರಿದೆ : ಏನದು ಗೊತ್ತಾ..?

09:04 PM Sep 02, 2024 IST | suddionenews
ಬಳ್ಳಾರಿ ಜೈಲಿನಲ್ಲಿ ಕೊನೆಗೂ ದರ್ಶನ್ ಆಸೆ ಈಡೇರಿದೆ   ಏನದು ಗೊತ್ತಾ
Advertisement

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಸಹವಾಸ ಮಾಡಿ ಹಾಗೋ ಹೀಗೋ ಬೇಕಾದ್ದನ್ನ ತರಿಸಿಕೊಳ್ಳುತ್ತಿದ್ದರು. ಆದರೆ‌ ಅಂದೊಂದು ದಿನ ರೌಡಿ ಶೀಟರ್ ಗಳ ಜೊತೆಗೆ ಕೂತು ಸಿಗರೇಟ್ ಸೇದಿದ ಫೋಟೋ ವೈರಲ್ ಆಗಿದ್ದೆ ತಡ, ಮರುದಿನವೇ ಬಳ್ಳಾರಿ ಜೈಲಿಗೆ ಶಿಫ್ಟ್ ಆದರು. ಈಗ ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿ ಪರಿಚಯಸ್ಥರು ಯಾರ್ಯಾರು ಇಲ್ಲ. ಜೊತೆಗೆ ದರ್ಶನ್ ಇರುವ ಕೋಣೆ ಮುಂದೆಯೇ ಸಿಸಿಟಿವಿ ಕ್ಯಾಮಾರಾ ಕಣ್ಗಾವಲಿದೆ. ಹೀಗಾಗಿ ಏನನ್ನು ಮಾಡುವುದಕ್ಕೆ ಆಗುತ್ತಿಲ್ಲ. ಇದರ ನಡುವೆ ಜೈಲಾಧಿಕಾರಿಗಳು ಈಗ ದರ್ಶನ್ ಅವರ ಆಸೆಯೊಂದನ್ನು ಈಡೇರಿಸಿದ್ದಾರೆ.

Advertisement
Advertisement

ದರ್ಶನ್ ಜೈಲಾಧಿಕಾರಿಗಳಿಗೆ ಮನವಿಯೊಂದನ್ನು ಮಾಡಿದ್ದರು. ನನಗೆ ಬೆನ್ನು ನೋವಿದೆ. ಇಂಡಿಯನ್ ಟಾಯ್ಲೆಟ್ ಗೆ ಹೋಗುವುದಕ್ಕೆ ಆಗುವುದಿಲ್ಲ. ಸರ್ಜಿಕಲ್ ಕಮೋಡ್ ಚೇರ್ ಬೇಕಾಗಿದೆ ಎಂದು ಮನವಿ ಮಾಡಿದ್ದರು. ಇನ್ನು ಈ ಸಂಬಂಧ ವಿಜಯಲಕ್ಷ್ಮೀ ಅವರು ಜೈಲಿಗೆ ಭೇಟಿ ನೀಡಿದಾಗ ದರ್ಶನ್ ಅವರಿಗೆ ಇರುವ ಬೆನ್ನು ನೋವಿನ ಸಮಸ್ಯೆ ಮೆಡಿಕಲ್ ರಿಪೋರ್ಟ್ ಅನ್ನು ಜೈಲಾಧಿಕಾರಿಗಳಿಗೆ ಸಲ್ಲಿಸಿದ್ದರು.

ಈ ರಿಪೋರ್ಟ್ ಸಿಕ್ಕ ಮೇಲೆ ಜೈಲಿನಲ್ಲಿಯೇ ದರ್ಶನ್ ಅವರಿಗೆ ಮೆಡಿಕಲ್ ಚೆಕಪ್ ಮಾಡಲಾಗಿದೆ. ಬೆನ್ನು ನೋವು ಇರುವುದು ಸತ್ಯ ಎಂಬುದು ತಿಳಿದ ಮೇಲೆ ದರ್ಶನ್ ಅವರ ಮನವಿಯಂತೆ ಸರ್ಜಿಕಲ್ ಕಮೋಡ್ ಚೇರ್ ಅನ್ನು ನೀಡಲಾಗಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ದರ್ಶನ್ ಅವರಿಗೆ ಚೇರ್ ಅನ್ನು ತರಿಸಲಾಗಿದೆ. ಜೈಲಾಧಿಕಾರಿಗಳು ಇದನ್ನು ತಪಾಸಣೆ ಮಾಡಿ ಬಳಿಕ ದರ್ಶನ್ ಇರುವ ಸೆಲ್ ಗೆ ಕಳುಹಿಸಿದ್ದಾರೆ.

Advertisement

Advertisement
Tags :
Advertisement