Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಳ್ಳಾರಿ ಜೈಲಿನಲ್ಲಿ ದರ್ಶನ್ ಲಾಕ್ : ಕುಟುಂಬಸ್ಥರು ಬಿಟ್ರೆ ಸ್ನೇಹಿತರು, ಸೆಲೆಬ್ರೆಟಿಗಳಿಗೆ ಭೇಟಿಗಿಲ್ಲ ಅವಕಾಶ..!

06:17 PM Aug 31, 2024 IST | suddionenews
Advertisement

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲು ಸೇರಿದ್ದಾರೆ. ಬಳ್ಳಾರಿಗೆ ಹೋದ ಮೇಲೆ ಕೈದಿ ಸಂಖ್ಯೆ ಕೂಡ ಬದಲಾಗಿದೆ. 511 ಕೈದಿಯಾಗಿದ್ದಾರೆ. ಬಳ್ಳಾರಿಗೆ ದರ್ಶನ್ ಬರುತ್ತಿದ್ದಾರೆಂದು ತಿಳಿದಾಗಲೇ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜೈಲು ಬಳಿ ಸೇರಿದ್ದರು. ಬೆಂಗಳೂರಿನಲ್ಲಿಯೇ ಇದ್ದಾಗ ದರ್ಶನ್ ಅವರನ್ನು ನೋಡುವುದಕ್ಕೆ ಸ್ನೇಹಿತರು ಕೂಡ ಬರುತ್ತಿದ್ದರು. ಆದರೆ ಈಗ ಬಳ್ಳಾರಿ ಜೈಲಿನಲ್ಲಿ ಹೊಸ ರೂಲ್ಸ್ ಮಾಡಿದ್ದು, ದರ್ಶನ್ ಅವರನ್ನು ನೋಡಲು ಕೇವಲ ಅವರ ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಲಾಗಿದೆ.

Advertisement

ಈ ಬಗ್ಗೆ ಡಿಐಜಿ ಟಿಪಿ ಶೇಷಾರವರು ಮಾಹಿತಿ ನೀಡಿದ್ದು, ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ದರ್ಶನ್ ಅವರನ್ನು ನೋಡಲು ಅವರ ಮೊದಲ ರಕ್ತಸಂಬಂಧಿಗಳಿಗೆ ಬಿಟ್ಟರೆ ಬೇರೆ ಯಾರಿಗೂ ಅವಕಾಶವಿಲ್ಲ. ಅದನ್ನು ಬಿಟ್ಟರೆ ವಕೀಲರಿಗೆ ಮಾತ್ರ ಅವಕಾಶವಿದೆ. ಸ್ನೇಹಿತರು, ಸೆಲೆಬ್ರೆಟಿಗಳಿಗೆ ಅವಕಾಶವಿರುವುದಿಲ್ಲ. ಅವರ್ಯಾರೆ ಬಂದರು ಭೇಟಿಗೆ ಅವಕಾಶ ನೀಡುವುದಿಲ್ಲ. ದರ್ಶನ್ ಅವರನ್ನು ಹೈ ಸೆಕ್ಯುರಿಟಿ ಸೆಲ್ ನ್ಳಿ ಇರಿಸಲಾಗಿದೆ. 15 ಸೆಲ್ ಗಳ ಪೈಕಿ ಬೇರೆ ಬೇರೆ ಸ್ಥಳದಲ್ಲಿ ನಾಲ್ಕು ಜನ ಕೈದಿಗಳಿದ್ದಾರೆ. ದರ್ಶನ್ ಅಕ್ಕ ಪಕ್ಕ ಯಾರೂ ಇಲ್ಲ.

ದರ್ಶನ್ ಸೆಲ್ ಮುಂದೆ ಮೂರು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಬಾಡಿವೂರ್ನ್ ಕ್ಯಾಮೆರಾ ಮೂಲಕ ನಿಗಾ ವಹಿಸಲಾಗಿದೆ. ದರ್ಶನ್ ಮೇಲೆ ಜಾಸ್ತಿ ನಿಗಾ ಇಡಲಾಗಿದೆ. ದರ್ಶನ್ ಗೆ ಬೆನ್ನು ನೋವಿದೆ. ಮೋಷನ್ ಸಮಸ್ಯೆಯಿಂದ ಊಟ ಬೇಡ ಎನ್ನುತ್ತಿದ್ದಾರೆ. ಜೈಲು ಊಟವನ್ನು ಸರಿಯಾಗಿ ನೀಡಲಾಗುತ್ತಿದೆ. ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡ್ತೀವಿ ಎಂದಿದ್ದಾರೆ.

Advertisement

Advertisement
Tags :
actor DarshanBallary jailBellary JailbengalurucelebritieschitradurgaDarshan lockDarshan Lockedfamily membersfriendsnot allowed to meetsuddionesuddione newsಚಿತ್ರದುರ್ಗದರ್ಶನ್ ಲಾಕ್ಬಳ್ಳಾರಿ ಜೈಲುಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article