Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿಪಿ ಯೋಗಿಶ್ವರ್ ಬಾವ ರಾಮಾಪುರ ಬಳಿ ಶವವಾಗಿ ಪತ್ತೆ..!

05:54 PM Dec 04, 2023 IST | suddionenews
Advertisement

ಚಾಮರಾಜನಗರ: ಮಾಜಿ ಸಚಿವಸ ಸಿಪಿ ಯೋಗೀಶ್ವರ್ ಬಾವ ಕಳೆದ ಎರಡು ದಿನದಿಂದ ಕಾಣೆಯಾಗಿದ್ದರು. ಇದೀಗ ಪೊಲೀಸರ ಹುಡುಕಾಟದ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಬಳಿ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬೆಡ್ ಶೀಟ್ ಹೊದಿಸಿ, ತಲೆ‌ಮೇಲೆ ಕಲ್ಲು ಎತ್ತಿ ಹಾಕಿ, ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಪೊಲೀಸರು ವಿಶೇಷ ತಂಡ ರಚಿಸಿಕೊಂಡು, ಹುಡುಕಾಟ ಶುರು ಮಾಡಿದ್ದರು. ಇದೀಗ ಸಿಸಿಟಿವಿ ಆಧರಿಸಿ, ಶವ ಪತ್ತೆ ಮಾಡಿದ್ದಾರೆ. ಡಿಸೆಂಬರ್ 2 ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹದೇವಯ್ಯ ಅವರು ಏಕಾಏಕಿ ನಾಪತ್ತೆಯಾಗಿದ್ದರು. ಇವರ ಮತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಡಿಸೆಂಬರ್ 3 ರಂದು ಮಹದೇವಯ್ಯ ಅವರ ಕಾರು ಹನೂರು ತಾಲೂಕಿನ ರಾಮಾಪುರದಲ್ಲಿ ಪತ್ತೆಯಾಗಿತ್ತು.

Advertisement
Advertisement
Tags :
Chamarajanagarcp yogeshwarrampuraಚಾಮರಾಜನಗರಬಾವರಾಮಾಪುರಶವವಾಗಿ ಪತ್ತೆಸಿಪಿ ಯೋಗಿಶ್ವರ್
Advertisement
Next Article