For the best experience, open
https://m.suddione.com
on your mobile browser.
Advertisement

ನಾಮಪತ್ರ ಸಲ್ಲಿಸಿದ ಸಿಪಿ ಯೋಗೀಶ್ವರ್ : ಸಿದ್ದು, ಡಿಕೆಶಿ ಸಾಥ್ : ರಂಗೇರಿತು ಚನ್ನಪಟ್ಟಣ ಅಖಾಡ..!

02:06 PM Oct 24, 2024 IST | suddionenews
ನಾಮಪತ್ರ ಸಲ್ಲಿಸಿದ ಸಿಪಿ ಯೋಗೀಶ್ವರ್   ಸಿದ್ದು  ಡಿಕೆಶಿ ಸಾಥ್   ರಂಗೇರಿತು ಚನ್ನಪಟ್ಟಣ ಅಖಾಡ
Advertisement

Advertisement

ರಾಮನಗರ: ರಾಜ್ಯದಲ್ಲಿ ಘೋಷಣೆಯಾದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿರುವುದು ಚನ್ನಪಟ್ಟಣ ಕ್ಷೇತ್ರ. ಇಡೀ ರಾಜ್ಯ ಮಾತ್ರವಲ್ಲ ದೆಹಲಿಯಲ್ಲಿ ಕುಳಿತ ಹೈಕಮಾಂಡ್ ನಾಯಕರಿಗೂ ತಲೆಕೆಡಿಸಿದಂತ ಕ್ಷೇತ್ರವಾಗಿ ಬದಲಾಯ್ತು. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸ್ಪರ್ಧಿಯೇ ಕಾಂಗ್ರೆಸ್ ಗೆ ಬಂದರು. ಈಗ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಸ್ಪರ್ಧೆ ಮಾಡೋದು ಯಾರೂ ಎಂಬ ಪ್ರಶ್ನೆ ಎದುರಾಗಿದೆ. ಯಾರೇ ನಿಂತರು ಗೆದ್ದು ಬರುವ ವಿಶ್ವಾಸದಲ್ಲಿರುವ ಸಿಪಿ ಯೋಗೀಶ್ವರ್ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

Advertisement

ಚನ್ನಪಟ್ಟಣದ ಕಾಂಗ್ರೆಸ್ ಮುಖಂಡರೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಬಂದ ಸಿಪಿ ಯೋಗೀಶ್ವರ್ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೆರವಣಿಗೆಯ ವೇಳೆ ಡಿಕೆ ಸುರೇಶ್ ಅವರು ಸಿಪಿ ಯೋಗೀಶ್ವರ್ ಜೊತೆಗೆ ಮೆರವಣಿಗೆ ಬಂದಿದ್ದಾರೆ. ಜೊತೆಗೆ ಸಚಿವ ರಾಮಲಿಂಗಾ ರೆಡ್ಡಿ, ಚೆಲುವರಾಯಸ್ವಾಮಿ, ಹೆಚ್ ಎಂ ರೇವಣ್ಣ ಅವರು ಕೂಡ ಸಿಪಿ ಯೋಗೀಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಜೊತೆಯಾಗಿದ್ದಾರೆ.

Advertisement

ಸಿಪಿ ಯೋಗೀಶ್ವರ್ ನೇರವಾಗಿ ಈಗ ಕುಮಾರಸ್ವಾಮಿ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ಅಭ್ಯರ್ಥಿ ಯಾರನ್ನೇ ನಿಲ್ಲಿಸಿದರೂ ಸೋಲಿಸಲೇಬೇಕೆಂದು ಹಠ ತೊಟ್ಟಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಸಿಪಿ ಯೋಗೀಶ್ವರ್ ಗೆ ಗಾಳ ಹಾಕಿದ್ದಂತ ಡಿಸಿಎಂ ಡಿಕೆ ಶಿವಕುಮಾರ್ ಗೆಲ್ಲುವ ಕುದುರೆಯನ್ನೇ ಕರೆ ತಂದಿದ್ದಾರೆ. ಆರಂಭದಲ್ಲಿ ಡಿಕೆ ಸುರೇಶ್ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಇದೀಗ ಸಿಪಿ ಯೋಗೀಶ್ವರ್ ಪಕ್ಷ ಸೇರಿದ ಮೇಲೆ ಅವೆಇಗೆ ಟಿಕೆಟ್ ನೀಡಿ, ಎಲ್ಲರೂ ಜೊತೆಯಾಗಿ ನಿಂತಿದ್ದಾರೆ.

Advertisement

Advertisement
Tags :
Advertisement