Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಪರೂಪಕ್ಕೆ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕರು ಸಿಎಂ ಪತ್ನಿ ಪಾರ್ವತಿ

02:52 PM Oct 12, 2024 IST | suddionenews
Advertisement

ಇಂದು ವಿಶ್ವ ವಿಖ್ಯಾತ ದಸರಾ ಸಂಭ್ರಮ. ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನವೇ ಈಗಾಗಲೇ ಧ್ವಜ ಪೂಜೆ ನೆರವೇರಿದೆ. ಇಂದು ಸಂಜೆ 4 ಗಂಟೆಯಿಂದ 4.30ರ ನಡುವಿನ ಕುಂಭ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.

Advertisement

ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆಯೇ ಸುತ್ತೂರು ಮಠಕ್ಕೆ ಭೇಟಿ ನೀಡಿ, ದೇವರ ಮಹಾಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ. ಬಳಿಲ ಅಲ್ಲಿಂದ ಲಲಿತಾ ಮಹಲ್ ಗೆ ತೆರಳಿ ಅಲ್ಲಿಂದ ಐರಾವತ ಬಸ್ ನಲ್ಲಿ ಅರಮನೆಗೆ ತೆರಳಿದರು. ಇಂದು ಸಿಎಂ ಕುಟುಂಬ ಸಮೇತ ಮೈಸೂರಿಗೆ ಭೇಟಿ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಹಾಗೂ ಸೊಸೆ ಸ್ಮಿತಾ ಅವರು ಕೂಡ ತಾಯಿಯ ದರ್ಶನಕ್ಕೆ ಬಂದಿದ್ದರು.

ಮೃತ ರಾಕೇಶ್ ಪತ್ನಿ ಸ್ಮಿತಾ ಅವರು ತಮ್ಮ ಅತ್ತೆಯ ಜೊತೆಗೆ ಬಂದಿದ್ದರು. ಒಂದೇ ಕಾರಿನಲ್ಲಿ ಸ್ಮಿತಾ ಹಾಗೂ ಪಾರ್ವತಿ ಅವರು ಬಂದಿದ್ದರು. ಸ್ಮಿತಾ ಅವರು ಕಾರು ಇಳಿದು ತಾಯಿಯ ದರ್ಶನ ಪಡೆದರು. ಆದರೆ ಪಾರ್ವತಿ ಅವರು ಕಾರಿನಿಂದ ಕೆಳಗೆ ಇಳಿಯದೆ, ಅಲ್ಲಿಯೇ ತಾಯಿಗೆ ನಮಸ್ಕರಿಸಿದರು. ಈ ವೇಳೆ ಮಾಧ್ಯಮದವರ ಕಣ್ಣಿಗೆ ಬಿದ್ದ ಪಾರ್ವತಿ ಅವರು, ತಕ್ಷಣ ಸೆರಗನ್ನು ಕವರ್ ಮಾಡಿಕೊಂಡರು. ಅಷ್ಟರೊಳಗೆ ಪಾರ್ವತಿ ಅವರು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ‌.

Advertisement

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಈಗ ಹೇಗಿದ್ದಾರೆಂದು ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಅವರ ಮದುವೆ ಫೋಟೋದಲ್ಲಷ್ಟೇ ಪಾರ್ವತಿ ಅವರನ್ನು ನೋಡಿರುವುದು. ಇದೇ ಮೊದಲ ಬಾರಿಗೆ ಹೀಗೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ.

Advertisement
Tags :
bengaluruchitradurgaCM's wife Parvatisuddionesuddione newsಚಿತ್ರದುರ್ಗಬೆಂಗಳೂರುಸಿಎಂ ಪತ್ನಿ ಪಾರ್ವತಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article