Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದ ಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಅರೆಸ್ಟ್

11:08 AM Jun 11, 2024 IST | suddionenews
Advertisement

ಸ್ಯಾಂಡಲ್ ವುಡ್ ದಿನೇ ದಿನೇ ಆಶ್ಚರ್ಯಕರ ವಿಚಾರಗಳು ಸದ್ದು ಮಾಡುತ್ತಿವೆ. ನಿನ್ನೆ ಮೊನ್ನೆಯೆಲ್ಲಾ ಡಿವೋರ್ಸ್ ಕೇಸ್ ಗಳು ಸದ್ದು ಮಾಡಿದ್ದವು. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿ ಶಾಕ್ ನೀಡಿದೆ.

Advertisement

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಇಂದು ಬೆಳಗ್ಗೆ ಅವರ ಫಾರ್ಮ್ ಹೌಸ್ ನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಸ್ವಾಮೀಜಿ. ಕೆಟ್ಟದಾಗಿ ಮೆಸೇಜ್ ಮಾಡಿದ್ದಲ್ಲದೆ, ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರಂತೆ. ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಶೆಡ್ ನಲ್ಲಿ ಸ್ವಾಮೀಜಿಯ ಕೊಲೆ ಮಾಡಲಾಗಿದೆ.

ಜೂನ್ 8ರಂದು ರೇಣುಕಾಸ್ವಾಮಿ ಅವರ ಮರ್ಡರ್ ನಡೆದಿತ್ತು. ಕೊಲೆ ಮಾಡಿದ ಬಳಿಕ ಆ ಮೃತದೇಹವನ್ನು ಮೋರಿಗೆ ಬಿಸಾಡಲಾಗಿದೆ. ಜೂನ್ 9ರಂದು ಕಾಮಾಕ್ಷಿಪಾಳ್ಯ ಮೋರಿಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಸಿಕ್ಕಿದೆ. ಅಂದೇ ಮೂರು ಮಂದಿಯನ್ನು ಅರೆಸ್ಟ್ ಮಾಡಲಾಗಿತ್ತು. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ರೇಣುಕಾಸ್ವಾಮಿ ಕಾಲ್ ರೆಕಾರ್ಡ್ ಸೇರಿದಂತೆ ಹಲವು ರೀತಿಯಲ್ಲಿ ತನಿಖೆ ನಡೆಸಿದ್ದರು. ಅರೆಸ್ಟ್ ಆಗಿದ್ದ ಮೂವರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡಿದ್ದರು. ಮೂವರು ನೀಡಿದ್ದ ಹೇಳಿಕೆಯಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಹೆಸರು ಕೇಳಿ ಬಂದಿತ್ತು. ಮೈಸೂರಿನ ಫಾರ್ಮ್ ಹೌಸ್ ನಲ್ಲಿದ್ದ ದರ್ಶನ್ ಅವರನ್ನು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ.

Advertisement

Advertisement
Tags :
Actor Darshan arrestedbengaluruChallenging star darshanchitradurgasuddionesuddione newsSwami murder caseಅರೆಸ್ಟ್ಚಿತ್ರದುರ್ಗನಟ ದರ್ಶನ್ ಅರೆಸ್ಟ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಸ್ವಾಮಿ ಕೊಲೆ ಕೇಸ್
Advertisement
Next Article