For the best experience, open
https://m.suddione.com
on your mobile browser.
Advertisement

ಕಾವೇರಿ ವಿಚಾರ : ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ, ಎರಡು ವಿಚಾರಗಳಿಗೆ ಬೇಡಿಕೆ

08:15 PM Sep 30, 2023 IST | suddionenews
ಕಾವೇರಿ ವಿಚಾರ   ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ  ಎರಡು ವಿಚಾರಗಳಿಗೆ ಬೇಡಿಕೆ
Advertisement

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆದಿದೆ. ಇದರ ಮಧ್ಯೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಆ ಅರ್ಜಿಯಲ್ಲಿ ಎರಡು ಬೇಡಿಕೆಗಳಿಗೆ ಮನವಿ ಮಾಡಿದೆ. ಅದರಲ್ಲಿ ತಮಿಳುನಾಡಿಗೆ ನೀರು ಬಿಡುವುದಕ್ಕೆ ಸಾಧ್ಯವಿಲ್ಲ ಎಂಬುದು, ಮತ್ತೊಂದು ಮೇಕೆದಾಟು ಯೋಜನೆಗೆ ಅನುಮತಿ ಕೋರಿ ಬೇಡಿಕೆ ಇಡಲಾಗಿದೆ.

Advertisement
Advertisement

ಕಾವೇರಿ ವಿಚಾರದಲ್ಲಿ ಪದೇ ಪದೇ ಕರ್ನಾಟಕಕ್ಕೆ ಸೋಲಾಗುತ್ತಿದೆ. ರಾಜ್ಯದಲ್ಲಿ ಮಳೆ ಇಲ್ಲದೆ, ಕಾವೇರಿ ಕೊಳ್ಳದಲ್ಲಿ ನೀರು ದಿನೇ ದಿನೇ ಖಾಲಿಯಾಗುತ್ತಿದೆ. ಹೀಗಾಗಿ ಬೆಂಗಳೂರಿಗರಿಗೂ ಕುಡಿಯುವ ನೀರು ಕೂಡ ಕಷ್ಟವಾಗಲಿದೆ ಎಂದು ರೈತರೆಲ್ಲಾ ಹೋರಾಟ ಮಾಡಿದ್ದಾರೆ. ಒಂದಿನ ಬೆಂಗಳೂರು ಬಂದ್, ಒಂದಿನ ಕರ್ನಾಟಕ ಬಂದ್ ಮಾಡಲಾಗಿದೆ. ಇದರ ನಡುವೆಯೂ ತಮಿಳುನಾಡಿಗೆ ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಲಾಗಿದೆ.

Advertisement

ಇದರ ನಡುವೆ ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯೂ ನಡೆದಿದೆ. ನ್ಯಾಯಾಧೀಶರು, ನ್ಯಾಯಮೂರ್ತಿಗಳ ಈ ಸಭೆಯಲ್ಲಿ ಹಾಜರಾಗಿದ್ದರು. ಈ ವೇಳೆ ಸಭೆಯಲ್ಲಿ ಕಾನೂನಿನ ಹೋರಾಟ ಮಾಡುವ ವಿಚಾರವಾಗಿ ಚರ್ಚೆ ನಡೆದಿದೆ.

Advertisement
Advertisement

Advertisement
Tags :
Advertisement