For the best experience, open
https://m.suddione.com
on your mobile browser.
Advertisement

ಮಂಡ್ಯದಲ್ಲಿ ಕರೆಂಟ್ ಕಂಬಕ್ಕೆ ಕಾರು ಡಿಕ್ಕಿ : ಮೂವರು ಯುವರು ಸಾವು..!

12:57 PM Feb 04, 2024 IST | suddionenews
ಮಂಡ್ಯದಲ್ಲಿ ಕರೆಂಟ್ ಕಂಬಕ್ಕೆ ಕಾರು ಡಿಕ್ಕಿ   ಮೂವರು ಯುವರು ಸಾವು
Advertisement

ಮಂಡ್ಯ: ಕರೆಂಟ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಕೆ ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Advertisement

30 ವರ್ಷದ ಅನಿಕೇತ್, 32 ವರ್ಷದ ಪವನ್ ಶೆಟ್ಟಿ, 32 ವರ್ಷದ ಚಿರಂಜೀವಿ ಮೃತ ಪಟ್ಟ ಯುವಕರು. ಕಾರು ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಆ ರಭಸಕ್ಕೆ ಮೂರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು‌ಮುಟ್ಟಿದೆ. ಈಗಷ್ಟೇ ಜವಬ್ದಾರಿಗಳನ್ನು ತೆಗೆದುಕೊಳ್ಳಬೇಕಾದ ವಯಸ್ಸು, ಈಗಷ್ಟೇ ಕನಸುಗಳನ್ನು ನನಸು ಮಾಡಿಕೊಳ್ಳುವ ಸಮಯದಲ್ಲಿ ಗಂಡು ಮಕ್ಕಳು ಹೀಗೆ ಬಾರದೂರಿಗೆ ಹೊರಟು ನಿಂತರೆ ಯಾವ ತಂದೆ-ತಾಯಿಗೆ ಸಹಿಸಿಕೊಳ್ಳುವ ಧೈರ್ಯ ಇದ್ದಾತ. ಆ ನೋವಿನಲ್ಲೇ ಮೃತರ ಪೋಷಕರು ವಿಧಿಯನ್ನು ಶಪಿಸುತ್ತಿದ್ದಾರೆ.

Advertisement
Advertisement

ನಾಲ್ವರು ಸ್ನೇಹಿತರು ಸೇರಿ, ಅಕ್ಕಿ ಹೆಬ್ಬಾಳು ಗ್ರಾಮಕ್ಕೆ ಹೊರಟಿದ್ದರು. ಈ ವೇಳೆ ಕಾರು ವೇಗವಾಗಿ ಚಲಿಸುತ್ತಿತ್ತು. ಅಕ್ಕಿಹೆಬ್ಬಾಳು ಗ್ರಾಮಕ್ಕೆ ಬರುತ್ತಿದ್ದಂತೆ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಪಕ್ಕದಲ್ಲಿಯೇ ಇದ್ದ ಹಳ್ಳಕ್ಕೆ ಬಿದ್ದಿತ್ತು. ರಭಸದಲ್ಲಿ ಬಿದ್ದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಸಾಗರ್ ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಸಾಗರ್ ಎಂಬ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೆ ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರವನ್ನು ಸಂತಸದಿಂದ ಕಳೆಯಬೇಕು ಎಂದುಕೊಂಡಿದ್ದ ಸ್ನೇಹಿತರು ಮಸಣದ ಹಾದಿಯನ್ನು ಹಿಡಿದಿದ್ದಾರೆ.

Advertisement
Tags :
Advertisement