Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು : ಗಜಪಡೆ ನೀಚತನಕ್ಕೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಫ್ಟ್ ಆನ್ಸರ್

06:45 PM Apr 06, 2024 IST | suddionenews
Advertisement

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಗಜಪಡೆ ಎಂಬ ಖಾತೆಯಿಂದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಗ್ಗೆ ಅವಹೇಳನ ಮಾಡಲಾಗಿತ್ತು. RCB ಸೋಲಿಗೆ ಅವರೇ ಕಾರಣ ಎಂಬಂತೆ ಪೋಸ್ಟ್ ನಲ್ಲಿ ಹಾಕಲಾಗಿತ್ತು. ಅದಷ್ಟೇ ಆಗಿದ್ದರೆ ಇಗ್ನೋರ್ ಮಾಡಿ ಜನ ಬಿಡುತ್ತಿದ್ದರೇನೋ. ಆದರೆ ಆ ಖಾತೆಯನ್ನು ಮೆಂಟೈನ್ ಮಾಡುವವನ ಮನಸ್ಥಿತಿಯಂತೆಯೇ ಪದ ಬಳಕೆಯೂ ಆಗಿತ್ತು. ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಗ್ಗೆ ಕೆಟ್ಟ ಪದಗಳನ್ನು ಬಳಸಲಾಗಿತ್ತು. ಅದಕ್ಕೆ ಸ್ಯಾಂಡಲ್ ವುಡ್ ನಟ-ನಟಿಯರಷ್ಟೇ ಅಲ್ಕ ಸಾಮಾನ್ಯರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಆ ಪೋಸ್ಟ್ ಬಗ್ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಉತ್ತರಿಸಿದ್ದಾರೆ.

Advertisement

 

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಅಶ್ವಿನಿ ಅವರೇ ಎಲ್ಲಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮಕ್ಕಳ ಜವಾಬ್ದಾರಿ, ಇಂಡಸ್ಟ್ರಿಯಲ್ಲಿ ಆಕ್ಟೀವ್, ಪಿಆರ್ಕೆ ಸಂಸ್ಥೆ ಹೀಗೆ ಅಪ್ಪು ನೋಡಿಕೊಳ್ಳುತ್ತಿದ್ದ ಎಲ್ಲಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈಗ ಪಿಆರ್ಕೆ ಪ್ರೊಡಕ್ಷನ್ ನಿಂದ O2 ಸಿನಿಮಾ ಕೂಡ ರಿಲೀಸ್ ಗೆ ರೆಡಿ ಇದೆ. ಹೊಸಬರಿಗೆ ಅವಕಾಶ ನೀಡುತ್ತಾ, ಹೊಸತನಗಳನ್ನು ಹುಟ್ಟು ಹಾಕುವ ದಾರಿಯಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಗುತ್ತಿದ್ದಾರೆ. ಇಂಥ ಧೈರ್ಯವಂತ ಮಹಿಳೆ ಬಗ್ಗೆ ಆ ವ್ಯಕ್ತಿ ಕೆಟ್ಟದಾಗಿ ಮಾತನಾಡಿದ್ದಲ್ಲದೆ, ಒಮ್ಮೆ ದರ್ಶನ್ ಫೋಟೋ, ಇನ್ನೊಮ್ಮೆ ಸುದೀಪ್ ಫೋಟೋ ಬಳಸಿ ಆಟವಾಡಿದ್ದಾನೆ.

Advertisement

ಪಾಸಿಟಿವ್ ಮತ್ತು ನೆಗೆಟಿವ್ ನ ಹೇಗೆ ಸ್ವೀಕಾರ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್, ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ ಎಂದಿದ್ದಾರೆ.

Advertisement
Tags :
Ashwini Puneeth rajkumarbangaloreಅಶ್ವಿನಿ ಪುನೀತ್ ರಾಜ್‍ಕುಮಾರ್ಗಜಪಡೆ ನೀಚತನಸಾಫ್ಟ್ ಆನ್ಸರ್
Advertisement
Next Article