Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿದ್ದರಾಮಯ್ಯರನ್ನು ಸೋಲಿಸಲು RSS ನವರನ್ನು ಉತ್ತರ ಪ್ರದೇಶ, ಬಿಹಾರದಿಂದ ಕರೆಸೀತಾ ಬಿಜೆಪಿ..?

05:44 PM Apr 24, 2023 IST | suddionenews
Advertisement

 

Advertisement

ಮೈಸೂರು: ವರುಣಾ ಕ್ಷೇತ್ರವನ್ನು ಗೆಲ್ಲಬೇಕೆಂದು ಬಿಜೆಪಿ ಶತಾಯಗತಯ ಪ್ರಯತ್ನ ನಡೆಸುತ್ತಿದೆ. ವರುಣಾ ಕ್ಷೇತ್ರ ಹೇಳಿ ಕೇಳಿ ಸಿದ್ದರಾಮಯ್ಯ ಅವರಿಗೆ ಬೆಂಬಲ ಇರುವಂತ ಕ್ಷೇತ್ರ. ಇಲ್ಲಿ ವಿ ಸೋಮಣ್ಣ ಅವರನ್ನು ಸಿದ್ದರಾಮಯ್ಯ ವಿರುದ್ಧ ಅಖಾಡಕ್ಕೆ ಇಳಿಸಲಾಗಿದೆ. ಹೀಗಾಗಿ ಸೋಮಣ್ಣ ಅವರ ಗೆಲುವಿಗಾಗಿ ಬಿಜೆಪಿ RSS ಸಂಘದವರನ್ನು ಕರೆಸಲಾಗಿದೆ.

ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಒಟ್ಟು 200 ಆರ್ ಎಸ್ ಎಸ್ ಸಂಘಟನೆಯವರನ್ನು ಕರೆಸಲಾಗಿದೆಯಂತೆ. ಅದರಲ್ಲೂ ಯೋಗಿ ಆದಿತ್ಯನಾಥ್ ಗೆಲುವಿಗೆ ಕಾರಣಕರ್ತರಾದವರನ್ನೇ ಇಲ್ಲಿಗೂ ಪ್ರಚಾರಕ್ಕೆ ಕರೆಸಲಾಗಿದೆಯಂತೆ. ಬೇರೆ ರಾಜ್ಯದಿಂದ ಬಂದವರು ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಪ್ರಚಾರ ಮಾಡಲಿದ್ದಾರೆ.

Advertisement

ವರುಣಾ ಕ್ಷೇತ್ರದ ಮೇಲೆ ಬಿ ಎಲ್ ಸಂತೋಷ್ ಗಮನ ಹರಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದುಕೊಂಡಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ವರುಣಾದ ಮೇಲೆ ಆತ್ಮವಿಶ್ವಾಸವಿಟ್ಟಿದೆ. ಸಿದ್ದರಾಮಯ್ಯ ಅವರ ಮಗ ರಾಕೇಶ್ ಅವರ ಮಗ ಕೂಡ ಈ ಬಾರಿ ತಾತನ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಇನ್ನು ಯತೀಂದ್ರ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದಾರೆ.

Advertisement
Tags :
biharBjpdefeatfeaturedinvitedmysoremysuruRSSSiddaramaiahsuddioneUttar Pradeshಉತ್ತರ ಪ್ರದೇಶಬಿಜೆಪಿಬಿಹಾರಮೈಸೂರುಸಿದ್ದರಾಮಯ್ಯಸುದ್ದಿಒನ್
Advertisement
Next Article