For the best experience, open
https://m.suddione.com
on your mobile browser.
Advertisement

ಭದ್ರಾವತಿಯ ಕೊರಿಯೋಗ್ರಾಫರ್ ನವ್ಯಾ ಕೊಲೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಗಂಡ..!

06:31 PM Aug 30, 2024 IST | suddionenews
ಭದ್ರಾವತಿಯ ಕೊರಿಯೋಗ್ರಾಫರ್ ನವ್ಯಾ ಕೊಲೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಗಂಡ
Advertisement

Advertisement
Advertisement

ಬೆಂಗಳೂರು: ಭದ್ರಾವತಿ ಮೂಲದ ನವ್ಯಾ ಕಳೆದ ಮೂರು ವರ್ಷದ ಹಿಂದೆ ಕಾರು ಚಾಲಕ ಕಿರಣ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಎರಡು ದಿನದ ಹಿಂದೆ ಹೆಂಡತಿಯನ್ನೇ ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹೋಗಿದ್ದ. ಅದೇ ಚಾಕುವಿನಲ್ಲಿ ಕುತ್ತಿಗೆ ಕೊಯ್ದುಕೊಳ್ಳುವುದಕ್ಕೆ ಹೋಗಿದ್ದ ಭಯವಾಗಿ, ಬಾತ್ ರೂಮಿನಲ್ಲಿದ್ದ ಪೆನಾಯಿಲ್ ಕುಡಿದು ಸಾಯಲು ಯತ್ನಿಸಿದ್ದ. ತಕ್ಷಣ ಬದುಕಬೇಕೆಂದುಕೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದ. ಹೆಂಡತಿಯನ್ನು ಕೊಂದವ ಈಗ ಪೊಲೀಸರ ವಿಚಾರಣೆಯಲ್ಲಿ ಹೆಂಡತಿಯನ್ನು ಕೊಂದಿದ್ದೇಕೆ ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

'ಸಾರ್ ನನಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ನಾನು ಮಾಡುವುದಕ್ಕೂ ಹೋಗಿರಲಿಲ್ಲ‌. ನನ್ನ ಹೆಂಡತಿ ಬೇರೊಬ್ಬರ ಜೊತೆಗೆ ಸಲುಗೆಯಿಂದ ಇರುವುದಕ್ಕೆ ಶುರು ಮಾಡಿದ್ದಳು. ಅದನ್ನು ನಾನು ಗಮನಿಸಿದ್ದೆ. ಇದೆ ವಿಚಾರಕ್ಕೆ ನಮ್ಮಿಬ್ಬರ ನಡುವೆ ಹಲವು ಬಾರಿ ಜಗಳವಾಗಿದೆ. ಆಗಸ್ಟ್ 28ರ ರಾತ್ರಿ ಕುಇಡ ಕೊಲೆ ಮಾಡುವ ಉದ್ದೇಶ ನನಗಿರಲಿಲ್ಲ.

Advertisement

ನವ್ಯಾ ನನಗೆ ಚಾಕು ತೋರಿಸಿ ಬೆದರಿಸಿದ್ದಳು. ಮನೆಯಿಂದ ಹೋಗು. ನಿನ್ನ ಸಹವಾಸ ನನಗೆ ಸಾಕಾಗಿದೆ. ನನಗೆ ಡಿವೋರ್ಸ್ ಬೇಕು ಎಂದು ಕೇಳಿದ್ದಳು. ಆ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚದೆ, ಚಾಕು ಹಾಕಿಬಿಡುತ್ತಾಳೇನೋ ಎಂಬ ಭಯದಿಂದ ಹೊರಗೆ ಹೋದೆ. ಇದಾದ ಬಳಿಕ ಸ್ವಲ್ಪ ಸಮಯ ಬಿಟ್ಟು ನವ್ಯಾ ಜೊತೆಗೆ ಮಾತನಾಡುವುದಕ್ಕೆಂದು ಹೋದೆ. ಆದರೆ ಚಾಕು ಆಗಲು ತಲೆದಿಂಬಿನ ಕೆಳಗೆ ಇಟ್ಟುಕೊಂಡಿದ್ದಳು. ಅದನ್ನು ಕಂಡು ಕಬ್ಬಿಣದ ರಾಡ್ ನಿಂದ ಅವಳಿಗೆ ಹೊಡೆದೆ. ಅದೇ ಚಾಕುವಿನಿಂದ ಕತ್ತು ಕೊಯ್ದೆ. ಆಗ ನವ್ಯಾ ಗೆಳತಿ ಐಶ್ವರ್ಯಾ ಕುಇಡ ಬೆಡ್ ರೂಮಿನಲ್ಲಿಯೇ ಇದ್ದರು. ನವ್ಯಾ ಹಾಗೂ ಐಶ್ವರ್ಯಾ ಪಾರ್ಟಿ ಮುಗಿಸಿಕೊಂಡು ಬಂದಿದ್ದರು. ನಮ್ಮಿಬ್ಬರ ನಡುವೆ ಅಷ್ಟು ಗಲಾಟೆಯಾದರೂ ಐಶ್ವರ್ಯಾಗೆ ಎಚ್ಚರವಾಗಲಿಲ್ಲ' ಎಂದು ಹೇಳಿದ್ದಾನೆ.

Advertisement

ಇನ್ನು ಬೆಳಗ್ಗೆ ದಚ್ಚರವಾದಾಗ ನವ್ಯಾ ಸ್ಥಿತಿ ಕಂಡು ಐಶ್ವರ್ಯಾ ಕಿರುಚಿಕೊಂಡಿದ್ದಾಳೆ. ಅಕ್ಕ ಪಕ್ಕದವರೆಲ್ಲ ಬಂದು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Tags :
Advertisement