Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದರ್ಶನ್ ಅವರ ಮತ್ತೊಂದು ಆಸೆ ಈಡೇರಿಸಿದ ಬಳ್ಳಾರಿ ಜೈಲು ಅಧಿಕಾರಿಗಳು..!

11:51 AM Sep 07, 2024 IST | suddionenews
Advertisement

ಬಳ್ಳಾರಿ: ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಮಾಡಿ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಆಗಿರುವ ದರ್ಶನ್ ಗೆ ಅಲ್ಲಿ ಯಾರೂ ಸಹಪಾಠಿಗಳಿಲ್ಲ. ಈಗ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಆಗಾಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿ ಜೈಲಿಗೆ ಭೇಟಿ ನೀಡಿ ಒಂದಷ್ಟು ವಿಚಾರಗಳನ್ನ ಹೇಳುತ್ತಾ ಇರುತ್ತಾರೆ. ಇದೀಗ ರಾಜ್ಯದಲ್ಲಿ ಏನಾಗ್ತಿದೆ, ತನ್ನ ಕೇಸಲ್ಲಿ ಏನೆಲ್ಲಾ ಡೆವಲಪ್ಮೆಂಟ್ ಆಗ್ತಾ ಇದೆ ಎಂಬುದನ್ನು ದರ್ಶನ್ ಅವರೇ ಖುದ್ದಾಗಿ ತಿಳಿದುಕೊಳ್ಳಬಹುದು. ಬಳ್ಳಾರಿ ಜೈಲು ಅಧಿಕಾರಿಗಳು ಅಂಥದ್ದೊಂದು ಅವಕಾಶ ಒದಗಿಸಿಕೊಟ್ಟಿದ್ದಾರೆ.

Advertisement

ಜೈಲಿನಲ್ಲಿ ಈಗ ದರ್ಶನ್ ಇರುವ ರೂಮಿಗೆ ಟಿವಿ ಫಿಕ್ಸ್ ಮಾಡಲಾಗಿದೆ. ಕೈದಿಗಳಿಗೆ ಟಿವಿ ನೀಡುವ ಅವಕಾಶ ಜೈಲಿನಲ್ಲಿ ಇದೆ. ಇಷ್ಟು ದಿನ ಆ ಟಿವಿ ಹಾಳಾಗಿತ್ತು. ದರ್ಶನ್ ಕೂಡ ಕೊಲೆ ಕೇಸಲ್ಲಿ ಏನಾಗ್ತಿದೆ ಎಂಬುದನ್ನು ನೋಡಬೇಕಿತ್ತು. ಹೀಗಾಗಿ ಮನವಿಯನ್ನು ಮಾಡಿದ್ದರು. ಆ ಮನವಿಯನ್ನು ಸ್ಚೀಕರಿಸಿದ ಬಳ್ಳಾರಿ ಜೈಲು ಅಧಿಕಾರಿಗಳು ಟಿವಿಯನ್ನು ನೀಡಿದ್ದಾರೆ.

ದರ್ಶನ ಇರುವ ಸೆಲ್ ಗೆ ಹೈಯರ್‌ ಕಂಪನಿಯ ಟಿವಿ ಅಳವಡಿಸಿದ್ದಾರೆ. ಈ ಹಿಂದೆ ಟಿವಿ ಬೇಡವೆಂದು ಹೇಳಿದ್ದ ದರ್ಶನ್, ಕೇಸ್ ಸ್ಟ್ರಾಂಗ್ ಆಗುತ್ತಾ ಹೋಗುತ್ತಿರುವ ಕಾರಣ, ತನ್ನ ವಿಚಾರ ತಿಳಿದುಕೊಳ್ಳುವುದಕ್ಕೆ ಟಿವಿ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಬಳ್ಳಾರಿ ಜೈಲಿಗೆ ಹೋದ ಮೇಲೆ ಟಾಯ್ಲೆಟ್ ಚೇರ್ ಬೇಕು ಎಂದು ಕೇಳಿದ್ದರು ಅದನ್ನು ನೀಡಲಾಗಿದೆ. ಈಗ ಟಿವಿ ಕೂಡ ನೀಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ತನಗೆ ಬೇಕಾದ್ದನ್ನು ರೌಡಿಶೀಟರ್ ಗಳ ಸ್ನೇಹದಿಂದ ಸುಲಭವಾಗಿ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಆದರೆ ಬಳ್ಳಾರಿ ಜೈಲಿನಲ್ಲಿ ಅವರುಗೆ ಯಾರು ಪರಿಚಯದವರೇ ಇಲ್ಲವಾಗಿದೆ.

Advertisement

Advertisement
Tags :
actor Darshananother wish of DarshanBallary jailBellary Jail officialsದರ್ಶನ್ಬಳ್ಳಾರಿ ಜೈಲು ಅಧಿಕಾರಿಗಳು
Advertisement
Next Article