Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೆಂಗಳೂರು ಗ್ರಾಮಾಂತರ : ಡಾ.ಮಂಜುನಾಥ್ ಮುನ್ನಡೆ

09:24 AM Jun 04, 2024 IST | suddionenews
Advertisement

 

Advertisement

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ವಿಚಾರದಲ್ಲಿ ಬೆಂಗಳೂರು ಗ್ರಾಮಾಂತರ ಕೂಡ ಗಮನ ಸೆಳೆದಿದ್ದಂತ ಕ್ಷೇತ್ರ. ಮೊದಲ ಬಾರಿಗೆ ಡಾ.ಮಂಜುನಾಥ್ ಅವರು ರಾಜಕೀಯ ಪ್ರವೇಶ ಮಾಡಿದ್ದರು. ಅದರಲ್ಲೂ ಡಿಕೆ ಸುರೇಶ್ ಅವರ ಕ್ಷೇತ್ರದಲ್ಲಿಯೇ ತನ್ನ ರಾಜಕೀಯ ಭವಿಷ್ಯವನ್ನು ಅಗ್ನಿ ಪರೀಕ್ಷೆಗೆ ಒಡ್ಡಿದ್ದರು. ಇದೀಗ ಡಾ. ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ.

26 ಸಾವಿರ ಮತಗಳ ಅಂತರದಲ್ಲಿ ಡಾ.ಮಂಜುನಾಥ್ ಮುನ್ನಡೆ ಸಾಧಿಸಿದ್ದು, ಡಿ.ಕೆ.ಸುರೇಶ್ ಹಿನ್ನಡೆ ಸಾಧಿಸಿದ್ದಾರೆ. ಡಿಕೆ ಬ್ರದರ್ಸ್ ಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಈ ಬಾರಿ ಸಾಕಷ್ಟು ಪ್ರಚಾರವನ್ನು ನಡೆಸಿದ್ದರು. ಆದರೆ ಆರಂಭಿಕ ಎಣಿಕೆಯಲ್ಲಿಯೇ ಡಾ.ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ.

Advertisement

ಡಿ.ಕೆ.ಸುರೇಶ್ ಅವರು ಹಕವು ಬಾರಿ ಗೆದ್ದು ಬೀಗಿದ್ದರು. ಆದರೆ ಈ ಬಾರಿ ಮೊದಲ ಬಾರಿಗೆ ಮಂಜುನಾಥ್ ಅವರು ಸ್ಪರ್ಧೆ ನೀಡಿದ್ದಾರೆ. ಡಾ.ಮಂಜುನಾಥ್ ಅವರಿಗೆ ಜನ ಆಶೀರ್ವಾದ ಮಾಡಿರುವುದು ಆರಂಭದಲ್ಲಿಯೇ ಅರ್ಥವಾಗುತ್ತಿದೆ.

Advertisement
Tags :
Bangalore ruralbengaluruchitradurgaDr manjunathsuddionesuddione newsಚಿತ್ರದುರ್ಗಡಾ. ಮಂಜುನಾಥ್ಬೆಂಗಳೂರುಬೆಂಗಳೂರು ಗ್ರಾಮಾಂತರಮುನ್ನಡೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article