For the best experience, open
https://m.suddione.com
on your mobile browser.
Advertisement

ಬೆಂಗಳೂರು ಗ್ರಾಮಾಂತರ : ಡಾ.ಮಂಜುನಾಥ್ ಮುನ್ನಡೆ

09:24 AM Jun 04, 2024 IST | suddionenews
ಬೆಂಗಳೂರು ಗ್ರಾಮಾಂತರ   ಡಾ ಮಂಜುನಾಥ್ ಮುನ್ನಡೆ
Advertisement

Advertisement

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ವಿಚಾರದಲ್ಲಿ ಬೆಂಗಳೂರು ಗ್ರಾಮಾಂತರ ಕೂಡ ಗಮನ ಸೆಳೆದಿದ್ದಂತ ಕ್ಷೇತ್ರ. ಮೊದಲ ಬಾರಿಗೆ ಡಾ.ಮಂಜುನಾಥ್ ಅವರು ರಾಜಕೀಯ ಪ್ರವೇಶ ಮಾಡಿದ್ದರು. ಅದರಲ್ಲೂ ಡಿಕೆ ಸುರೇಶ್ ಅವರ ಕ್ಷೇತ್ರದಲ್ಲಿಯೇ ತನ್ನ ರಾಜಕೀಯ ಭವಿಷ್ಯವನ್ನು ಅಗ್ನಿ ಪರೀಕ್ಷೆಗೆ ಒಡ್ಡಿದ್ದರು. ಇದೀಗ ಡಾ. ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ.

Advertisement

26 ಸಾವಿರ ಮತಗಳ ಅಂತರದಲ್ಲಿ ಡಾ.ಮಂಜುನಾಥ್ ಮುನ್ನಡೆ ಸಾಧಿಸಿದ್ದು, ಡಿ.ಕೆ.ಸುರೇಶ್ ಹಿನ್ನಡೆ ಸಾಧಿಸಿದ್ದಾರೆ. ಡಿಕೆ ಬ್ರದರ್ಸ್ ಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಈ ಬಾರಿ ಸಾಕಷ್ಟು ಪ್ರಚಾರವನ್ನು ನಡೆಸಿದ್ದರು. ಆದರೆ ಆರಂಭಿಕ ಎಣಿಕೆಯಲ್ಲಿಯೇ ಡಾ.ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ.

Advertisement
Advertisement

ಡಿ.ಕೆ.ಸುರೇಶ್ ಅವರು ಹಕವು ಬಾರಿ ಗೆದ್ದು ಬೀಗಿದ್ದರು. ಆದರೆ ಈ ಬಾರಿ ಮೊದಲ ಬಾರಿಗೆ ಮಂಜುನಾಥ್ ಅವರು ಸ್ಪರ್ಧೆ ನೀಡಿದ್ದಾರೆ. ಡಾ.ಮಂಜುನಾಥ್ ಅವರಿಗೆ ಜನ ಆಶೀರ್ವಾದ ಮಾಡಿರುವುದು ಆರಂಭದಲ್ಲಿಯೇ ಅರ್ಥವಾಗುತ್ತಿದೆ.

Tags :
Advertisement