Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಶ್ವಿನಿ ಪುನೀತ್ ರಾಜ್‍ಕುಮಾರ್ ನಿಂದಿಸಿದ ಕಿಡಿಗೇಡಿಗಳು ಈಗ ಗಪ್ ಚಿಪ್..!

11:56 AM May 19, 2024 IST | suddionenews
Advertisement

ಆರ್ಸಿಬಿ ಆಟಗಾರರು ಆರಂಭದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುತ್ತಾ ಬಂದಿತ್ತು. ಇದು ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರವಾಗಿತ್ತು. ಆದರೆ ಈ ಸೋಲು-ನೋವಿನ ನಡುವೆ ಯಾರೋ ಕಿಡಿಗೇಡಿಗಳು ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಕೆಟ್ಟ ಪದಗಳಿಂದ ಸೋಷಿಯಲ್ ಮೀಡಿಯಾದಲ್ಲಿ ನಿಂದಿಸಿದ್ದರು. ಇದೀಗ ಆರ್ಸಿಬಿಯ ಸತತ ಗೆಲುವಿನಿಂದ ಕಿಡಿಗೇಡಿಗಳಿಗೆ ತಿರುಗೇಟು ಕೊಟ್ಟಂತೆ ಆಗಿದೆ.

Advertisement

 

ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ. ಆರ್ಸಿಬಿಯ ಸತತ ಗೆಲುವು, ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹಿನ್ನೆಲೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಹೊಗಳಿಕೆಯ ಮಾತುಗಳು ಸಲ್ಲುತ್ತಿವೆ. ಸೋಷಿಯಲ್ ಮೀಡಿಯಾದಲ್ಲೆಲ್ಲಾ ಅಶ್ವಿನಿ ಅವರದ್ದೇ ಮಾತುಕತೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿವೆ.

Advertisement

ನಮ್ಮ ಆರ್​ಸಿಬಿ ಪ್ಲೇ ಆಫ್​ಗೆ ಹೋಗೋಕೆ ಕಾರಣನೇ ನಮ್ಮ ದೊಡ್ಮನೆಯ ಅದೃಷ್ಟ ದೇವತೆ ಅಶ್ವಿನಿ ಅಕ್ಕ ಎಂದು ಸುಬ್ಬು ಎನ್. ಮೂರ್ತಿ ಎನ್ನುವರು ಎಕ್ಸ್ ಅಕೌಂಟ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಅಶ್ವಿನ್ ಅವರ ಬಗ್ಗೆ ಚೀಪ್ ಕಮೆಂಟ್ಸ್ ಮಾಡಿದ್ದ ಇಡಿಯಟ್ಸ್​ ಈಗ ಸತತವಾಗಿ 6 ಪಂದ್ಯಗಳನ್ನು ಆರ್​ಸಿಬಿ ಗೆದ್ದು ಪ್ಲೇ ಆಫ್​ಗೆ ಹೋಗಿದೆ. ಈಗ ಎಲ್ಲಿದ್ದೀರಾ ಇಡಿಯಟ್ಸ್ ಎಂದು ನಿಂದಿಸಿದ್ದವರಿಗೆ ಪ್ರಶ್ನೆ ಮಾಡಿದ್ದಾರೆ. ಪವರ್ ಸ್ಟಾರ್ ಅಭಿಮಾನಿ ಎನ್ನುವ ಎಕ್ಸ್​ ಅಕೌಂಟ್​ನಲ್ಲಿ ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ. ಅದೃಷ್ಟ ತಂದ ಹೆಣ್ಣು (ಅಶ್ವಿನಿ ಪುನೀತ್ ರಾಜ್ ಕುಮಾರ್) ಅಂತ ಬರೆದು ಫೋಟೋ ಜೊತೆ ಶೇರ್ ಮಾಡಿದ್ದಾರೆ.

Advertisement
Tags :
Ashwini Puneeth rajkumarbangaloreಅಶ್ವಿನಿ ಪುನೀತ್ ರಾಜ್‍ಕುಮಾರ್ಕಿಡಿಗೇಡಿಗಳುಗಪ್ ಚಿಪ್ಬೆಂಗಳೂರು
Advertisement
Next Article