Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಾವೇರಿಗಾಗಿ ಪೂಜೆ ಸಲ್ಲಿಸಿದ ಅಂಬರೀಶ್ ಪುತ್ರ ಮತ್ತು ಸೊಸೆ

12:54 PM Sep 30, 2023 IST | suddionenews
Advertisement

 

Advertisement

ಮಳೆ ಉತ್ತಮವಾಗಿದ್ದರೆ, ಕಾವೇರಿ ಕೊಳ್ಳಗಳು ಸಂಪೂರ್ಣವಾಗಿ ತುಂಬುತ್ತಿತ್ತು. ಆಗ ವರ್ಷಪೂರ್ತಿ ರೈತರಿಗೆ, ಕುಡಿಯುವ ನೀರಿಗೆ ಆತಂಕ ಎದುರಾಗುತ್ತಿರಲಿಲ್ಲ. ಆದರೆ ಮಳೆ ಇಲ್ಲದೆ ಬೆಳೆಗೂ ನೀರಿಲ್ಲ, ಕುಡಿಯುವುದಕ್ಕೂ ನೀರು ಸಾಲಲ್ಲ ಎಂಬ ಭಯ ರಾಜ್ಯದ ಜನರಲ್ಲಿದೆ. ಇದರ ನಡುವೆಯೇ ತಮಿಳುನಾಡಿಗೆ ನೀರು ಹರಿಯುತ್ತಲೆ ಇದೆ. ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಬೇಕು ಅಂದ್ರೆ ಮಳೆ ಬರಲೇಬೇಕು.

ಮಂಡ್ಯದ ಗಂಡು ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮಳೆಗಾಗಿ ಕಾವೇರಿ ತಾಯಿಯನ್ನು ಪ್ರಾರ್ಥಿಸಿದ್ದಾರೆ. ಇಂದು ತಲಕಾವೇರಿಯಲ್ಲಿರುವ ಕಾವೇರಿಗೆ ಪೂಜೆ ಸಲ್ಲಿಸಿದ್ದಾರೆ. ಕಾವೇರಿಯ ಉಗಮ ಸ್ಥಾನಕ್ಕೆ ತನ್ನ ಪತ್ನಿಯೊಂದಿಗೆ ತೆರಳಿ, ವಿಶೇಷ ಪೂಜೆ ನೆರವೇರಿಸಿ, ಮಳೆಗಾಗಿ ಪ್ರಾರ್ಥಿಸಿದ್ದಾರೆ.

Advertisement

 

ಸುಮಲತಾ ಅಂಬರೀಶ್ ಈ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ಕಾವೇರಿ ಉಗಮ ಸ್ಥಳ ತಲಕಾಡಿನಲ್ಲಿ ಇಂದು ಅಭಿಷೇಕ್ ಅಂಬರೀಶ್, ಅವಿವಾ ಅಭಿಷೇಕ್ ಅವರೊಂದಿಗೆ ತಾಯಿ ಕಾವೇರಿಗೆ ಪೂಜೆ ಸಲ್ಲಿಸಿದ್ದಾರೆ. ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಹಲವರು ಕಮೆಂಟ್ ಮಾಡಿ, ಅದು ತಲಕಾಡು ಅಲ್ಲ ತಲಕಾವೇರಿ ಎಂದು ತಿದ್ದಿದ್ದಾರೆ.

Advertisement
Tags :
Ambareeshdaughter-in-lawkaveripujaಅಂಬರೀಶ್ಕಾವೇರಿಪುತ್ರಪೂಜೆಬೆಂಗಳೂರುಸುದ್ದಿಒನ್ಸೊಸೆ
Advertisement
Next Article