Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸದನ ಬಿಟ್ಟು ಸಚಿವರೆಲ್ಲ ತೆಲಂಗಾಣದಲ್ಲಿದ್ದಾರೆ : ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

04:47 PM Dec 06, 2023 IST | suddionenews
Advertisement

ಬೆಳಗಾವಿ: ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಯ ಸಿಕ್ಕಿದೆ. ಹೀಗಾಗಿ ಹಲವು ಸಚಿವರು ತೆಲಂಗಾಣದಲ್ಲಿ ಇದ್ದಾರೆ. ಅಧಿವೇಶನ ಆರಂಭವಾದರು ಸಚಿವರೆಲ್ಲಾ ತೆಲಂಗಾಣದಲ್ಲಿ ಇದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಈ ಮಾತಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಬೆಳಗಾವಿಯಲ್ಲಿ ಈ ಸಂಬಂಧ ಮಾತನಾಡಿದ ಅವರು, ಎಲ್ಲರೂ ಹೋಗಿಲ್ಲ. ಎಲ್ಲೊ ಒಂದಿಬ್ಬರು ಅಲ್ಲಿ ಇದ್ದಾರೆ. ಬಹುತೇಕ ಜನ ವಾಪಾಸ್ ಬಂದಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಜಮೀರ್ ಅಹ್ಮದ್ ಮಾತ್ರ ಬರಬೇಕು ಅಷ್ಟೇ ಎಂದಿದ್ದಾರೆ‌. ಇದೇ ವೇಳೆ ಕುಮಾರಸ್ವಾಮಿ ಅವರ ಅಭಿವೃದ್ಧಿ ಭಾಷಣವಿಲ್ಲ, ಸಿದ್ದರಾಮಯ್ಯ ಅವರು ಕೇವಲ ಓಲೈಕೆ ಭಾಷಣ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಅದೆಲ್ಲಾ ನಿಮ್ಮಿಂದಲೇ ಆಗಿದೆ. ಎಲ್ಲಾ ಸಮುದಾಯಗಳು ಸೇರಿದಂತೆ ಮುಸ್ಲಿಂ ಸಮುದಾಯವನ್ನು ರಕ್ಷಣೆ ಮಾಡಲಾಗುವುದು ಎಂದಿದ್ದಾರೆ.

 

Advertisement

ಇನ್ನು ಬ್ರಾಂಡ್ ಬೆಂಗಳೂರಿನ ಬಗ್ಗೆ ಮಾತನಾಡಿ, ನಾವೂ ಅಧಿಕಾರಕ್ಕೆ ಬಂದು ಆರು ತಿಂಗಳಾಯಿತು. ಬಿಜೆಪಿಯವರು ಬ್ರಾಂಡ್ ಬೆಂಗಳೂರು ಮಾಡಿದ್ದಾರೆಯೇ..? ಈ ಹಿಂದೆಯೇ ಉಚ್ಛ ನ್ಯಾಯಾಲಯವೇ ಗುಂಡಿ ಮುಚ್ಚಿಲ್ಲ ಎಂದು ಛೀಮಾರಿ ಹಾಕಿತ್ತು. ಬೆಂಗಳೂರಿನ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ಯಾವ ಹಕ್ಕಿದೆ. ಬಿಜೆಪಿ ನಾಲ್ಕು ವರ್ಷವಿದ್ದರು, ಅವರಿಗೆ ಗುಂಡಿ ಮುಚ್ಚಲು ಆಗಲಿಲಗಲ ಎಂದಿದ್ದಾರೆ.

Advertisement
Tags :
All the ministersbangaloreBjpBJP's accusationCM SiddaramaiahCM Siddaramaiahaexcept the HouseTelanganaತೆಲಂಗಾಣಬಿಜೆಪಿ ಆರೋಪಬೆಂಗಳೂರುಸಚಿವಸದನಸಿಎಂ ಸಿದ್ದರಾಮಯ್ಯ
Advertisement
Next Article