For the best experience, open
https://m.suddione.com
on your mobile browser.
Advertisement

ಯುಗಾದಿ ನಂತರ ಒಳ್ಳೆ ಬೆಳೆ-ಮಳೆಯಾಗಲಿದೆ : ಕೋಡಿಶ್ರೀ

06:37 PM Feb 19, 2024 IST | suddionenews
ಯುಗಾದಿ ನಂತರ ಒಳ್ಳೆ ಬೆಳೆ ಮಳೆಯಾಗಲಿದೆ   ಕೋಡಿಶ್ರೀ
Advertisement

ಕೋಲಾರ: ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ರಾಜ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಕಳೆದ ವರ್ಷ ಮಳೆ ಗಗನ ಕಚ್ಚಿದ್ದು, ಬೆಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ರಾಜ್ಯದೆಲ್ಲೆಡೆ ಬರದ ಪರಿಸ್ಥಿತಿ ತಾಂಡವವಾಡುತ್ತಿದೆ. ಇದೀಗ ರೈತರಿಗೆ ಖುಷಿ ಕೊಡುವಂತ, ಸಂತಸ ಪಡುವಂತ ಭವಿಷ್ಯವನ್ನು ಕೋಡಿಶ್ರೀ ಮಠದ ಶ್ರೀಗಳು ನುಡಿದಿದ್ದಾರೆ.

Advertisement
Advertisement

ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿ, ಯುಗಾದಿ ಕಳೆದ ನಂತರ ರಾಜ್ಯದಲ್ಲಿ ಒಳ್ಳೆಯ ಮಳೆ-ಬೆಳೆ ಆಗಲಿದೆ ಎಂಬ ಸಿಹಿ ಸುದ್ದಿ ನೀಡಿದ್ದಾರೆ. ಅವರ ಈ ಭವಿಷ್ಯವಾಣಿಯಿಂದ ರೈತರು ಸಮಾಧಾನಗೊಂಡಿದ್ದಾರೆ. ಬರದಿಂದ ತತ್ತರಿಸಿದ್ದ ರೈತರಿಗೆ ಕೋಡಿಶ್ರೀಗಳ ನುಡಿ ಸಮಾಧಾನ ತಂದಿದೆ.

Advertisement

ಇನ್ನು ಇದೇ ವೇಳೆ ರಾಜಕೀಯದ ಬಗ್ಗೆಯೂ ಮಾತನಾಡಿ, ಗ್ಯಾರಂಟಿಗಳಿಂದ ಸರ್ಕಾರ ನಡೆಯುತ್ತಿದೆಯಾ ಎಂಬ ಪ್ರಶ್ನೆಗೂ ಉತ್ತರಿಸಿ, ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ರಾಷ್ಟ್ರ ರಾಜಕಾರಣ ಕೂಡ ಯುಗಾದಿ ನಂತರವೇ ಗೊತ್ತಾಗಲಿದೆ‌ ಯುಗಾ್ಇ ನಂತರ ಭವಿಷ್ಯ ಬರಲಿದೆ. ಒಂದು ತಿಂಗಳು ಕಳೆದ ಮೇಲೆ ಮಳೆ ಬೆಳೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ತೊಂದರೆ ಇದೆ. ಬೆಂಕಿ ಹಾವಳಿ, ನೀರಿನ ಹಾವಳಿ, ಯುದ್ಧ ಆಗುತ್ತದೆ. ಅನೇಕ ಸಾವು-ನೋವುಗಳು ಆಗುತ್ತವೆ. ಮತಾಂಧತೆ ಹೆಚ್ಚುತ್ತದೆ. ಬಾಂಬ್ ಸ್ಪೋಟವಾಗುತ್ತದೆ‌ ಭೂಕಂಪ ಆಗುತ್ತದೆ. ಧಾರ್ಮಿಕ ಮುಖಂಡನ ಸಾವು ಸಂಭವಿಸಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ. 2024ರ ಹೊಸ ವರ್ಷವೂ ಈ ಬಗ್ಗೆ ಭವಿಷ್ಯ ನುಡಿದಿದ್ದರು. ಅಕಾಲಿಕ ಮಳೆಯಾಗಲಿದೆ, ಜಗತ್ತಿಗೆ ಒಳ್ಳೆಯ ದಿನಗಳಿಲ್ಲ, ಬಾಂಬ್ ಸಿಡಿಯುವ ಸಂಭವವಿದೆ ಎಂದೆಲ್ಲಾ ತಿಳಿಸಿದ್ದರು.

Advertisement
Advertisement

Advertisement
Tags :
Advertisement