For the best experience, open
https://m.suddione.com
on your mobile browser.
Advertisement

ಹೆಣ್ಣು ಮಕ್ಕಳ ಮರಣಾನಂತರ ಅವರ ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು : ಹೈಕೋರ್ಟ್ ಮಹತ್ವದ ಆದೇಶ

07:24 AM Jan 10, 2024 IST | suddionenews
ಹೆಣ್ಣು ಮಕ್ಕಳ ಮರಣಾನಂತರ ಅವರ ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು   ಹೈಕೋರ್ಟ್ ಮಹತ್ವದ ಆದೇಶ
Advertisement

Advertisement
Advertisement

ಬೆಂಗಳೂರು : ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಪೂರ್ವಜರ ಆಸ್ತಿಗೆ ಹೆಣ್ಣುಮಕ್ಕಳ ಕಾನೂನುಬದ್ಧ ವಾರಸುದಾರರ ಹಕ್ಕುಗಳನ್ನು ಕಸಿದುಕೊಳ್ಳಲಾಗುವುದಿಲ್ಲ ಎಂದು  ಹೈಕೋರ್ಟ್ ಸ್ಪಷ್ಟಪಡಿಸಿದೆ. 

Advertisement

ಹೆಣ್ಣು ಮಕ್ಕಳು ಮರಣಾನಂತರ ಅವರ ಮಕ್ಕಳು ಪಿತ್ರಾರ್ಜಿತ ಆಸ್ತಿಗೆ ಅರ್ಹರಾಗುತ್ತಾರೆ ಎಂದು ಇತ್ತೀಚೆಗೆ ತೀರ್ಪು ನೀಡಲಾಗಿತ್ತು.  ತಮ್ಮ ಒಡಹುಟ್ಟಿದವರು ಸಾವನ್ನಪ್ಪಿದ್ದು, ಅವರಿಗಾಗಲಿ, ಮಕ್ಕಳಿಗಾಗಲಿ ಆಸ್ತಿಯಲ್ಲಿ ಪಾಲು ಏಕೆ ನೀಡಬೇಕು ಎಂದು ಗದಗ ಜಿಲ್ಲೆ ನರಗುಂದ ತಾಲೂಕಿನ ನಿವಾಸಿ ಚೆನ್ನಬಸಪ್ಪ ಹೊಸಮಠ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ತನಿಖೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರು ಅರ್ಜಿದಾರರ ವಾದವನ್ನು ತಿರಸ್ಕರಿಸಿದರು.

Advertisement
Advertisement

ಹುಟ್ಟಿನಿಂದಲೇ ಮಕ್ಕಳಿಗೆ (ಮಗಳು ಅಥವಾ ಮಗ) ಆಸ್ತಿ ಪಡೆಯುವ ಹಕ್ಕು ಬರುತ್ತದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು. ಮಗನ ಮರಣದ ನಂತರ ಅವರ ವಾರಸುದಾರರಿಗೆ ಉತ್ತರಾಧಿಕಾರದ ಹಕ್ಕು ಹೇಗೆ ಅನ್ವಯಿಸುತ್ತದೆಯೋ ಅದೇ ರೀತಿ ಹೆಣ್ಣುಮಕ್ಕಳಿಗೂ ಅನ್ವಯಿಸುತ್ತದೆ. ರಾಜ್ಯಾಂಗ ಸಮಾನತೆ ಸೂತ್ರಗಳನ್ನು ನ್ಯಾಯಾಲಯಗಳು ಕಾಪಾಡಬೇಕು ಲಿಂಗ ಬೇಧವಿಲ್ಲದೆ ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿದರು.

"ಈ ತೀರ್ಪು ಲಿಂಗ ಸಮಾನತೆಯನ್ನು ಒತ್ತಿಹೇಳುತ್ತದೆ. ಇದು ಹೆಣ್ಣುಮಕ್ಕಳು ಯಾವಾಗ ತೀರಿಹೋಗಿದ್ದಾರೆ ಎಂಬುದನ್ನು ಲೆಕ್ಕಿಸದೆ ತೀರಿಹೋದ ಹೆಣ್ಣು ಮಕ್ಕಳ ವಾರಸುದಾರರಿಗೆ
ನ್ಯಾಯಸಮ್ಮತವಾದ ಪಾಲು ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ವ್ಯಖ್ಯಾನಿಸಿದ್ದಾರೆ. ಈ ಸಂದರ್ಭದಲ್ಲಿ ವಿನೀತ್ ಶರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನ್ಯಾಯಾಧೀಶರು ಉಲ್ಲೇಖಿಸಿದರು.

ಸುಪ್ರೀಂ ಕೋರ್ಟ್ ನಿಯಮಗಳು (ತಿದ್ದುಪಡಿ) ಪೂರ್ವ ಘಟನೆಗಳ ಆಧಾರದ ಮೇಲೆ ಪ್ರಯೋಜನಗಳನ್ನು ಒದಗಿಸುತ್ತವೆ ಮತ್ತು ಮಗಳ ಉತ್ತರಾಧಿಕಾರಿಗಳಿಗೆ ಪಿತ್ರಾರ್ಜಿತ ಹಕ್ಕನ್ನು ಸೂಚಿಸುತ್ತವೆ ಎಂದು ನ್ಯಾಯಮೂರ್ತಿ ಮಗದಮ್ ಹೇಳಿದರು."ಸೆಕ್ಷನ್ 6(1)(ಎ) ಜನನದ ಮೂಲಕ ಮಗಳನ್ನು ಉತ್ತರಾಧಿಕಾರದ ಹಕ್ಕಿನಲ್ಲಿ ಮಗನಂತೆ ಸಹ-ಪಾಲುದಾರರನ್ನಾಗಿ ಮಾಡಿದರೆ, ಮೃತ ಮಗಳ ಕಾನೂನುಬದ್ಧ ಉತ್ತರಾಧಿಕಾರಿಗಳು 2005 ರ ಸುಪ್ರೀಂ ಕೋರ್ಟ್ ತಿದ್ದುಪಡಿಯ ಪ್ರಯೋಜನವನ್ನು ನಿರಾಕರಿಸಲಾಗುವುದಿಲ್ಲ, ಎಂದು ನ್ಯಾಯಾಧೀಶರು ಉಲ್ಲೇಖಿಸಿದರು.

ಚೆನ್ನಬಸಪ್ಪ ಅವರು ಪಿತ್ರಾರ್ಜಿತ ಆಸ್ತಿ ಪ್ರಕರಣದಲ್ಲಿ ಗದಗ ಪ್ರಧಾನ ಸಿವಿಲ್ ನ್ಯಾಯಾಧೀಶರು ಅಕ್ಟೋಬರ್ 3, 2023 ರಂದು ನೀಡಿದ ಆದೇಶವನ್ನು ಪ್ರಶ್ನಿಸಿದರು. ಹಿಂದೂ ಉತ್ತರಾಧಿಕಾರ ಕಾಯಿದೆ, 2005 ರ ತಿದ್ದುಪಡಿಯ ಮೊದಲು ಅವರ ಸಹೋದರಿ ನಿಧನರಾದ ಕಾರಣ, ಅವರ ಸಹೋದರಿ, ನಾಗವ್ವ ಮತ್ತು ಸಂಗವ್ವ ಅವರ ಕಾನೂನು ಉತ್ತರಾಧಿಕಾರಿಗಳಿಗೆ ಸಮಾನ ಪಾಲನ್ನು ನೀಡುವ ಮೂಲ ತೀರ್ಪನ್ನು ಮಾರ್ಪಡಿಸಲು ಅವರು ಕೋರಿದರು.
ನ್ಯಾಯಾಧೀಶರು ಅವರ ವಾದಗಳನ್ನು ತಿರಸ್ಕರಿಸಿದರು.

Advertisement
Tags :
Advertisement