For the best experience, open
https://m.suddione.com
on your mobile browser.
Advertisement

ಟಿಕೆಟ್ ಟು ಫಿನಾಲೆ ಟಾಸ್ಕ್ ನಲ್ಲಿ ದೋಸ್ತಿಗಳ ನಡುವೆ ಬಿರುಕು : ವರ್ತೂರು ವರ್ತನೆಗೆ ತುಕಾಲಿ ಶಾಕ್

05:48 PM Jan 10, 2024 IST | suddionenews
ಟಿಕೆಟ್ ಟು ಫಿನಾಲೆ ಟಾಸ್ಕ್ ನಲ್ಲಿ ದೋಸ್ತಿಗಳ ನಡುವೆ ಬಿರುಕು   ವರ್ತೂರು ವರ್ತನೆಗೆ ತುಕಾಲಿ ಶಾಕ್
Advertisement

ಬಿಗ್ ಬಾಸ್ ಸೀಸನ್ 10 ಕೆಲವೇ ಕೆಲವು ದಿನಗಳಲ್ಲಿ ಫಿನಾಲೆ ತಲುಪಲಿದೆ. ಮನೆಯಲ್ಲಿರುವ ಎಲ್ಲರಿಗೂ ಫಿನಾಲೆಗೆ ಹೋಗಲೇಬೇಕೆಂಬ ಆಸೆ ಇದ್ದೆ ಇದೆ. ಆದರೆ ಅದಕ್ಕೆ ಅಂತ ಸಾಕಷ್ಟು ಶ್ರಮ ಹಾಕಲೇಬೇಕಾಗಿದೆ. ಈಗ ಟಿಕೆಟ್ ಟು ಫೈನಲ್ ಟಾಸ್ಕ್ ಶುರುವಾಗಿದೆ. ಈ ಟಾಸ್ಕ್ ನಲ್ಲಿ ದೋಸ್ತಿಗಳ ನಡುವೆಯೇ ಬಿರುಕು ಬಿಡುವ ಸಾಧ್ಯತೆ ಕಾಣುತ್ತಿದೆ.

Advertisement
Advertisement

ಸದಾ ಜೊತೆ ಜೊತೆಯಾಗಿಯೇ ಕಾಣಿಸಿಕೊಳ್ಳುವವರು, ಗಾಸಿಪ್ ನಲ್ಲೂ ಜೊತೆ, ಬೆಂಬಲ ನೀಡುವಾಗಲೂ ಜೊತೆಗೆ ಇದ್ದವರು ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಜೊತೆಯಾಗಿಯೇ ಇರುತ್ತಾರೆ. ಆದರೆ ಸಂತು-ಪಂತು ನಡುವೆ ಈಗ ಅದೇಕೋ ಬಿರುಕು ಬಿಡುವಂತೆ ಕಾಣಿಸುತ್ತಿದೆ. ಆ ಒಂದು ಟಾಸ್ಕ್ ನಿಂದಾಗಿ. ಟಿಕೆಟ್ ಟು ಫಿನಾಲೆಯಲ್ಲಿ 100 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ ವರ್ತೂರು ಸಂತೋಷ್. ಹೀಗಾಗಿ ಬಿಗ್ ಬಾಸ್ ಒಂದು ಅಧಿಕಾರ ನೀಡಿದೆ.

Advertisement

ಮುಂದಿನ ಆಟದಲ್ಲಿ ಒಬ್ಬರನ್ನು ಆಚೆ ಇಡಬಹುದು ಎಂದು ಹೇಳಿದಾಗ ವರ್ತೂರು ಸಂತೋಷ್, ತುಕಾಲಿ ಅವರನ್ನೇ ಹೊರಗೆ ಇಟ್ಟಿದ್ದಾರೆ. ಇದು ತುಕಾಲಿಗೆ ಶಾಕಿಂಗ್ ಆಗಿ ಕಾಡಿದೆ. 'ಈ ರೀತಿ ಆದರೆ ಫ್ರೆಂಡ್ಶಿಪ್ ಗೆ ಎಲ್ಲಿದೆ ಬೆಲೆ. ದೇವರಾಣೆ ನೀನು ಈ ರೀತೊ ಮಾಡುತ್ತೀಯಾ ಅಂತ ಅಂದುಕೊಂಡಿರಲಿಲ್ಲ' ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಬಳಿಕ ಫ್ರೆಂಡ್ಶಿಪ್ ಸರಿ ಮಾಡಿಕೊಳ್ಳುವುದಕ್ಕೆ ಹೋದರೂ, ವರ್ತೂರು ಮಾತನಾಡುವುದಕ್ಕೆ ಇಷ್ಟ ಪಡುತ್ತಿಲ್ಲ. ನೀನು ನೀನಾಗಿರು, ನಾನು ನಾನಾಗಿ ಇರುತ್ತೀನಿ ಅಂತ ಹೇಳಿ ಎದ್ದು ಹೋಗಿದ್ದಾರೆ.

Advertisement

Advertisement
Tags :
Advertisement