Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಾನ್ಯಾಕೆ ಸಿಎಂ ಆಗಬಾರದು ಅಂತ ಮತ್ತೆ ಸಿಎಂ ಆಸೆ ಹೊರ ಹಾಕಿದ ಗೃಹ ಸಚಿವರು..!

07:06 PM Jun 13, 2023 IST | suddionenews
Advertisement

 

Advertisement

 

ಬೆಂಗಳೂರು : ದಲಿತ ಸಿಎಂ ವಿಚಾರ ರಾಜ್ಯದಲ್ಲಿ ಸದ್ದು ಮಾಡಿದಾಗೆಲ್ಲ ಜಿ ಪರಮೇಶ್ವರ್ ಅವರ ಹೆಸರೇ ಮುನ್ನೆಲೆಗೆ ಬರುತ್ತಾ ಇತ್ತು. ಪರಮೇಶ್ವರ್ ಅವರು ಕೂಡ ಆಗಾಗ ಸಿಎಂ ಆಗುವ ಆಸೆಯನ್ನು ಹೊರ ಹಾಕುತ್ತಿದ್ದರು‌. ಇದೀಗ ಮತ್ತೆ ಸಿಎಂ ವಿಚಾರವೇ ಸದ್ದು ಮಾಡುತ್ತಿದೆ.

Advertisement

ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳು ದಲಿತ ಸಚಿವರುಗಳಿಗೆ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪರಮೇಶ್ವರ್ ಅವರು, ನಾನು ಯಾಕೆ ಸಿಎಂ ಆಗಬಾರದು..? ಮುನಿಯಪ್ಪ ಯಾಕೆ ಆಗಬಾರದು..? ಮಹದೇವಪ್ಪ ಯಾಕೆ ಆಗಬಾರದು ಎಂದು ಪ್ರಶ್ನಿಸಿದ್ದಾರೆ.

ನಮ್ಮಲ್ಲಿ ಕೀಳರಿಮೆ ಇರಬಾರದು. ಅದಕ್ಕೆ ನಾನು ಯಾವಾಗಲೂ ನಾನು ಯಾಕೆ ಸಿಎಂ ಆಗಬಾರದು ಎಂದು ಹೇಳುತ್ತಾ ಇರುತ್ತೇನೆ. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ನಾವೂ ಉಳಿದುಕೊಳ್ಳುತ್ತೇವೆ. ಅದನ್ನು ಬಿಟ್ಟು ಎಡ, ಬಲ ಎಂದು ಹೇಳುತ್ತಿದ್ದರೆ ಯಾವ ಸಾಧನೆಯನ್ನು ಮಾಡುವುದಕ್ಕೆ ಆಗುವುದಿಲ್ಲ. ನಮಗೆ ಸಿಎಂ ಆಗುವ ಅವಕಾಶಗಳನ್ನೇ ತಪ್ಪಿಸಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

Advertisement
Tags :
bengaluruCMdesireexpressedfeaturedG. Parameshwarahome ministersuddioneಆಸೆಗೃಹ ಸಚಿವರುಪರಮೇಶ್ವರ್ಬೆಂಗಳೂರುಸಿಎಂ
Advertisement
Next Article