Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಾಮ ಮಂದಿರ ನಿರ್ಮಾಣ ಆಗಿದ್ದಕ್ಕೆ ಕಾಂಗ್ರೆಸ್ ಗೆ ಹೊಟ್ಟೆ ಕಿಚ್ಚು : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

02:14 PM Jan 02, 2024 IST | suddionenews
Advertisement

 

Advertisement

ವಿಜಯಪುರ: ರಾಮ ಮಂದಿರ ನಿರ್ಮಾಣ ಆಗಿದ್ದಕ್ಕೆ ಕಾಂಗ್ರೆಸ್ ನವರು ಹೊಟ್ಟೆ ಕಿಚ್ಚಿನಿಂದ ವರ್ತಿಸುತ್ತಾ ಇದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ರಾಮ ಅನ್ನುವುದು ಒಂದು ಕಾಲ್ಪನಿಕ ಅಂತ ಹೇಳಿದ್ದರು. ಪ್ರಧಾನ ಮಂತ್ರಿಗಳು ಯಾಕೆ ಉದ್ಘಾಟನೆಗೆ ಹೋಗುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು. ಇದ್ಯಾವುದು ಜನ ಸ್ವೀಕಾರ ಮಾಡಿಲ್ಲ ಎಂದಾಗ, ಈಗ 31 ವರ್ಷದ ಹಳೆ ಕೇಸನ್ನು ತೆಗೆದು ಜನರನ್ನು ಅರೆಸ್ಟ್ ಮಾಡುವಂತಹ ಅತ್ಯಂತ ನೀಚ ಕೃತ್ಯಕ್ಕೆ ಕಾಂಗ್ರೆಸ್ ಪಾರ್ಟಿ ಕೈ ಹಾಕಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

ಒಬ್ಬರು ಪೂಜಾರಿ ಅಂತ ಇದಾರೆ. ಇನ್ನೊಬ್ಬರು ಕುಲಕರ್ಣಿ ಎಂಬುವವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಅವರಿಗೆ 72 ವರ್ಷ. ನಾನು ಅಲ್ಲಿನ ಇನ್ಸ್‌ಪೆಕ್ಟರ್ ಹಾಗೂ ಗ್ರಾಮಾಂತರ ಪೊಲೀಸರು, ಸರ್ಕಾರದ ಆದೇಶವನ್ನು ನೋಡಿಕೊಂಡು, ಅಲ್ಲಿನ ಇನ್ಸ್‌ಪೆಕ್ಟರ್ ಅಂತು ಅತ್ಯಂತ ದ್ವೇಷ ಭಾವನೆಯಿಂದ ವರ್ತಿಸಿದ್ದಾರೆ. ಹೀಗಾಗಿ ರಾಮಮಂದಿರ ಆಗಿದ್ದಕ್ಕೆ ಕಾಂಗ್ರೆಸ್ ಅತ್ಯಂತ ಹೊಟ್ಟೆ ಕಿಚ್ಚಿನಿಂದ ವರ್ತಿಸುತ್ತಾ ಇದೆ. ಇದು ಸರಿಯಲ್ಲ. ಕಾನೂನು ಹೋರಾಟವಂತು ಮಾಡಿಯೇ ಮಾಡುತ್ತೀವಿ. ಸಾಮಾಜಿಕವಾಗಿಯೂ ಹೋರಾಡುತ್ತೀವಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

 

Advertisement
Tags :
CongressconstructionfeaturedhubballiRam MandirsuddioneUnion Minister Prahlad Joshiupsetಕಾಂಗ್ರೆಸ್ಕೇಂದ್ರ ಸಚಿವ ಪ್ರಹ್ಲಾದ್ ಜೋಶಿನಿರ್ಮಾಣರಾಮ ಮಂದಿರಸುದ್ದಿಒನ್ಹುಬ್ಬಳ್ಳಿ
Advertisement
Next Article