For the best experience, open
https://m.suddione.com
on your mobile browser.
Advertisement

ಮೂತ್ರ ಸಮಸ್ಯೆ ಇರುವವರಿಗೆ ಕಲ್ಲಂಗಡಿ ಬೀಜ ಉತ್ತಮ ಔಷಧ..!

05:51 AM Sep 16, 2024 IST | suddionenews
ಮೂತ್ರ ಸಮಸ್ಯೆ ಇರುವವರಿಗೆ ಕಲ್ಲಂಗಡಿ ಬೀಜ ಉತ್ತಮ ಔಷಧ
Advertisement

Advertisement
Advertisement

ಮೂತ್ರ ವಿಸರ್ಜನೆ ಒಂದು ನೈಸರ್ಗಿಕ ಕ್ರಿಯೆ. ಮೂತ್ರ ಮಾಡಿದಾಗ ದೇಹದಲ್ಲಿನ ಕಲ್ಮಶ, ವಿಷಕಾರಿ ಅಂಶಗಳಿದ್ದರೆ ಅವುಗಳು ಹೊರಗೆ ಆ ಮೂಲಕ ಹೋಗುತ್ತವೆ. ಮೂತ್ರದಿಂದಾನೇ ನಮ್ಮ ದೇಹದ ಹಲವು ಆರೋಗ್ಯದ ಸಮಸ್ಯೆಗಳನ್ನು ತಿಳಿದುಕೊಳ್ಳಬಹುದು. ಮೂತ್ರವೇನಾದರೂ ಬಣ್ಣ ಬಣ್ಣದಲ್ಲಿ ಹೋಗುತ್ತಿದ್ದರೆ ದೇಹದಲ್ಲೇನೋ ವ್ಯತ್ಯಾಸವಾಗಿದೆ ಎಂದೇ ಅರ್ತ. ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂದೇ ಅಲ್ಲಿಗೆ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

Advertisement

ದೇಹಕ್ಕೆ ನೀರು ಬಹಳ ಮುಖ್ಯ. ಹೆಚ್ಚು ನೀರು ಕುಡಿದರೆ ಹಲವು ಬಾರಿ ಮೂತ್ರ ವಿಸರ್ಜನೆಯನ್ನು ಮಾಡುತ್ತಾರೆ. ಆದರೆ ಅದೆಷ್ಟೋ ಜನ ನೀರು ಕುಡಿಯುವುದೇ ಬಹಳ ಕಡಿಮೆ. ಆಗ ದೇಹವೂ ನಿರ್ಜಲೀಕರಣಕ್ಕೆ ತಿರುಗುತ್ತದೆ. ಮೂತ್ರವೂ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದ ಕಾರಣ ಆದಷ್ಟು ಹೆಚ್ಚು ನೀರನ್ನು ಕುಡಿಯುವುದು ಉತ್ತಮ. ಇನ್ನು ಮೂತ್ರ ಮಾಡುವಾಗ ಹಲವರಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬೇಡಿ. ಮೂತ್ರಕೋಶದ ಅಕ್ಕಪಕ್ಕದ ಅಂಗಾಂಗಗಳಿಗೆ ಏನೋ ತೊಂದರೆಯಾಗಿರುವ ಕಾರಣಕ್ಕೇನೆ ಆ ರೀತಿಯ ನೋವು ಬರುವುದಕ್ಕೆ ಕಾರಣವಾಗುತ್ತದೆ.

Advertisement

ಮೂತ್ರಕೋಶದ ಹಲವು ನೋವುಗಳಿಗೆ ಕಲ್ಲಂಗಡಿ ಹಣ್ಣಿನ ಬೀಜ ಬೆಸ್ಟ್ ಮದ್ದು. ನಾವೆಲ್ಲಾ ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ತಿಂದು ಅದರ ಬೀಜವನ್ನು ಬಿಸಾಡುತ್ತೇವೆ. ಆದರೆ ಅದರಿಂದಾಗುವ ಉಪಯೋಗ ತಿಳಿದುಕೊಂಡರೆ ಖಂಡಿತ ನೀವೂ ಬಿಸಾಡುವುದಿಲ್ಲ. ಹಾಗಾದ್ರೆ ಅದು ಎಷ್ಟು ಉಪಯೋಗ..? ಹೇಗೆ ಬಳಕೆ ಮಾಡಬೇಕೆಂಬ ಮಾಹಿತಿ ಇಲ್ಲಿದೆ.

Advertisement

ಮೂತ್ರದ ಜಾಗದಲ್ಲಿ ಕಲ್ಲು ಇದ್ದಲ್ಲಿ, ಉರಿ‌ಮೂತ್ರ, ನೋವು ಇದ್ದವರು ಕಲ್ಲಂಗಡಿ ಹಣ್ಣಿನ ಬೀಜ ಬಳಸವಹುದು. ಕಲಗಲಂಗಡಿ ಹಣ್ಣಿನಲ್ಲಿ ನೀರಿನಂಶ ಸಾಕಷ್ಟು ಪ್ರಮಾಣದಲ್ಲಿ ಇದೆ. ಹೀಗಾಗಿ ಅದರ ಬೀಜವನ್ನು ಮೇಲಿನ ಸಿಪ್ಪೆ ಬಿಡಿಸಿ, ಒಣಗಿಸಿ ಸೇವಿಸಬಹುದು. ಇದರಿಂದ ಮೂತ್ರದ ಸಮಸ್ಯೆಗೆ ಪರಿಹಾರ ಸಿಗುತ್ತದೆ.

Tags :
Advertisement