For the best experience, open
https://m.suddione.com
on your mobile browser.
Advertisement

ದಾವಣಗೆರೆ ಚಿತ್ರಮಂದಿರದಲ್ಲಿ ಜಗ್ಗೇಶ್ ಸಿನಿಮಾ ನಿಲ್ಲಿಸಲು ಹೇಳಿ, ಪೋಸ್ಟರ್ ಮುಚ್ಚಿದ್ದೇಕೆ..?

04:16 PM May 03, 2023 IST | suddionenews
ದಾವಣಗೆರೆ ಚಿತ್ರಮಂದಿರದಲ್ಲಿ ಜಗ್ಗೇಶ್ ಸಿನಿಮಾ ನಿಲ್ಲಿಸಲು ಹೇಳಿ  ಪೋಸ್ಟರ್ ಮುಚ್ಚಿದ್ದೇಕೆ
Advertisement

Advertisement
Advertisement

Advertisement

ದಾವಣಗೆರೆ: ರಾಜ್ಯದಲ್ಲಿ ಚುನಾವಣಾ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ. ಮೂರು ಪಕ್ಷಗಳು ಸಹ ಸ್ಟಾರ್ ಪ್ರಚಾರಕರೊಂದಿಗೆ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ನವರಸ ನಾಯಕ ಜಗ್ಗೇಶ್ ಕೂಡ ಬಿಜೆಪಿಯಲ್ಲಿ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಈ ಮಧ್ಯೆ ಅವರ ನಟನೆಯ ರಾಘವೇಂದ್ರ ಸ್ಟೋರ್ ಸಿನಿಮಾ ಕೂಡ ರಿಲೀಸ್ ಆಗಿದೆ. ಅದ್ಭುತ ರೆಸ್ಪಾನ್ಸ್ ಪಡೆಯುತ್ತಿದೆ.

Advertisement
Advertisement

ಜಗ್ಗೇಶ್ ಅವರು ರಾಜ್ಯಸಭಾ ಸದಸ್ಯರು ಕೂಡ. ಸ್ಟಾರ್ ಪ್ರಚಾರಕರು ಕೂಡ ಆಗಿರುವ ಕಾರಣ ಅವರ ಸಿನಿಮಾದ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ. ದಾವಣಗೆರೆಯಲ್ಲಿರುವ ಗೀತಾಂಜಲಿ ಚಿತ್ರಮಂದಿರಕ್ಕೆ ಚುನಾವಣಾ ಆಯೋಗ ಭೇಟಿ ನೀಡಿ, ಸಿನಿಮಾ ನಿಲ್ಲಿಸುವಂತೆ ತಿಳಿಸಿದೆ. ಸಿನಿಮಾ ಪ್ರದರ್ಶನ‌ ಮಾಡದಂತೆ ಸೂಚಿಸಿದೆ.

ಆದರೆ ಚಿತ್ರಮಂದಿರದ ಮಾಲೀಕರು ಮಾತನಾಡಿದ ಮೇಲೆ ಸಮಸ್ಯೆ ಬಗೆಹರಿದಿದೆ. ಜಗ್ಗೇಶ್ ಅವರು ಸ್ಟಾರ್ ಪ್ರಚಾರಕರು ಅಷ್ಟೇ. ಅವರೇನು ಚುನಾವಣೆಯಲ್ಲಿ ನಿಂತಿಲ್ಲ ಎಂದ ಮೇಲೆ ಸಿನಿಮಾ ಪ್ರದರ್ಶನಕ್ಕೆ ಒಪ್ಪಿಗೆ ಸಿಕ್ಕಿದೆ. ಆದರೆ ಸಿನಿಮಾ ಪೋಸ್ಟರ್ ಮೇಲೆ ಆಯೋಗದ ಅಧಿಕಾರಿಗಳು ಬಿಳಿ ಹಾಳೆ ಅಂಟಿಸಿದ್ದಾರೆ. ಜಗ್ಗೇಶ್ ಮುಖ ಕಾಣದಂತೆ ಮಾಡಿದ್ದಾರೆ.

Advertisement
Tags :
Advertisement