For the best experience, open
https://m.suddione.com
on your mobile browser.
Advertisement

ಯುವ ಉದ್ಯಮಿ ಹರೀಶ್ ನಿಧನ

10:46 PM Mar 18, 2024 IST | suddionenews
ಯುವ ಉದ್ಯಮಿ ಹರೀಶ್ ನಿಧನ
Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 18 : ನಗರದ ಯುವ ಉದ್ಯಮಿ, ಸರಸ್ವತಿಪುರಂ ಬಡಾವಣೆಯ ವಾಸಿ, ಜೆಸಿಆರ್ ಬಡಾವಣೆಯ ಸಿಡ್ವಿನ್ ಕಂಪ್ಯೂಟರ್ ಮಾಲೀಕ ಸಿ. ಹರೀಶ್ (48 ವರ್ಷ) ಇಂದು (ಸೋಮವಾರ) ರಾತ್ರಿ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.

Advertisement
Advertisement

ಮೃತರು ತಾಯಿ, ಪತ್ನಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಸರಸ್ವತಿಪುರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ನಾಳೆ ಸಂಜೆಯವರೆಗೂ ವ್ಯವಸ್ಥೆ ಮಾಡಲಾಗಿದೆ. ನಾಳೆ (ಮಂಗಳವಾರ) ಸಂಜೆ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ನಗುಮೊಗದಿಂದಲೇ ಎಲ್ಲರನ್ನೂ ಆಕರ್ಷಿಸುತ್ತಿದ್ದ ಹರೀಶ್ ಅವರು ಅಪಾರ ಸಂಖ್ಯೆಯ ಸ್ನೇಹಿತರನ್ನು ಹೊಂದಿದ್ದರು.
ಹರೀಶ್ ಅವರ ಅಕಾಲಿಕ ಸಾವಿನಿಂದ ಸ್ನೇಹಿತರು ಹಿತೈಷಿಗಳು ತೀವ್ರ ಆಘಾತಕ್ಕೀಡಾಗಿದ್ದು, ನಗರದ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Advertisement
Advertisement

ಆರ್ಯವೈಶ್ಯ ಸಂಘದ ಅಧ್ಯಕ್ಷರು, ಸದಸ್ಯರು, ಸಮಾಜದ ಮುಖಂಡರು, ಅವರ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

Advertisement
Tags :
Advertisement