For the best experience, open
https://m.suddione.com
on your mobile browser.
Advertisement

ಮೃತ ಕಟ್ಟಡ ಕಾರ್ಮಿಕ ರಮೇಶ್ ಕುಟುಂಬಕ್ಕೆ ನೆರವಾದ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ : ಐವತ್ತು ಸಾವಿರ ರೂ.ಗಳ ಪರಿಹಾರದ ಚೆಕ್ ವಿತರಣೆ

05:42 PM Jun 13, 2024 IST | suddionenews
ಮೃತ ಕಟ್ಟಡ ಕಾರ್ಮಿಕ ರಮೇಶ್ ಕುಟುಂಬಕ್ಕೆ ನೆರವಾದ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ   ಐವತ್ತು ಸಾವಿರ ರೂ ಗಳ ಪರಿಹಾರದ ಚೆಕ್ ವಿತರಣೆ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ : ದಾವಣಗೆರೆ ಆಜಾದ್ ನಗರಕ್ಕೆ ಕೂಲಿ ಕೆಲಸಕ್ಕೆಂದು ಹೋಗಿ ಹೃದಯಾಘಾತದಿಂದ ಬುಧವಾರ ನಿಧನರಾದ ಗೋನೂರಿನ ಕಟ್ಟಡ ಕಾರ್ಮಿಕ ರಮೇಶ್ ಕುಟುಂಬಕ್ಕೆ ಮನೆ ಮಾಲೀಕರಿಂದ ಐವತ್ತು ಸಾವಿರ ರೂ.ಗಳ ಪರಿಹಾರದ ಚೆಕ್ ನೀಡಲಾಯಿತು.

Advertisement

ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಪರಿಹಾರದ ಚೆಕ್ಕನ್ನು ಕಾರ್ಮಿಕ ರಮೇಶ್‍ರವರ ಪತ್ನಿ ಲಕ್ಷ್ಮಮ್ಮನಿಗೆ  ವಿತರಿಸಲಾಯಿತು.

Advertisement
Advertisement

ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ರಾಜ್ಯ ಉಪಾಧ್ಯಕ್ಷರುಗಳಾದ ಕೆ.ಗೌಸ್‍ಪೀರ್, ಎಂ.ಆರ್.ನರಸಿಂಹಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಖಜಾಂಚಿ ಡಿ.ಈಶ್ವರಪ್ಪ, ಗೋನೂರು ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ್, ಸಂಘದ ನಿರ್ದೇಶಕರುಗಳಾದ ರಾಜಪ್ಪ, ನಿಂಗರಾಜು ಈ ಸಂದರ್ಭದಲ್ಲಿದ್ದರು.

Advertisement
Tags :
Advertisement