For the best experience, open
https://m.suddione.com
on your mobile browser.
Advertisement

ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅಭಿವೃದ್ಧಿ ಬಗ್ಗೆ ಮಾತಾಡದೇ ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ : ಸಿ. ಶಿವುಯಾದವ್

05:24 PM Feb 26, 2024 IST | suddionenews
ಕೇಂದ್ರ ಸಚಿವ ಎ  ನಾರಾಯಣ ಸ್ವಾಮಿ ಅಭಿವೃದ್ಧಿ ಬಗ್ಗೆ ಮಾತಾಡದೇ ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ   ಸಿ  ಶಿವುಯಾದವ್
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಚಿತ್ರದುರ್ಗ ಫೆ. 26 : ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ರವರು ಚುನಾವಣಾ ಪೂರ್ವದಲ್ಲಿ ನೀಡಿದ ವಿವಿಧ ರೀತಿಯ ಭರವಸೆಗಳನ್ನು ಸಂಸದರಾಗಿ ಐದು ವರ್ಷ ಪೂರೈಸುತ್ತಾ ಬಂದಿದ್ದರೂ ಅವು ಯಾವು ಸಹ ಈಡೇರಿಲ್ಲ ಅಭಿವೃಧ್ಧಿ ಬಗ್ಗೆ ಮಾತನಾಡದೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಕೆಪಿಸಿಸಿಯ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕರು, ನ್ಯಾಯಾವಾದಿಗಳಾದ ಶಿವುಯಾದವ್ ಸಂಸದರ ಹೇಳಿಕೆಯನ್ನು ಖಂಡಿಸಿದ್ದಾರೆ.

Advertisement
Advertisement

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2023-24ನೇ ಸಾಲಿನಲ್ಲಿ ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಿ 5300 ಕೋಟಿ ರೂ ನೀಡುತ್ತೇವೆ ಎಂದು ಹೇಳಿದ್ದರು.. ಆದರೆ ಇದುವರೆಗೂ ಸಹ ಹಣ ಬಿಡುಗಡೆಯಾಗಿಲ್ಲ.. ಇದರ ಬಗ್ಗೆ ಜಿಲ್ಲೆಯ ರೈತರು ತಮ್ಮ ಕಛೇರಿಯ ಮುಂದೆ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿರುತ್ತಾರೆ ಇದರ ಬಗ್ಗೆ ಗಮನ ಹರಿಸಿ ಎಂದ ಅವರು ಮದಕರಿ ಥೀಮ್ ಪಾರ್ಕ್ ನಿರ್ಮಾಣ ಮಾಡುವುದಾಗಿ ಗೃಹ ಸಚಿವ ಅಮಿತ್ ಶಾ ರವರು ಹೇಳಿದ್ದರು ಆದರೆ ಈಗ ಅದು ಎಲ್ಲಿದೆ ಅಂತನೂ ಗೊತ್ತಿಲ್ಲ. ದಾವಣಗೆರೆ - ತುಮಕೂರು ನೇರ ರೈಲ್ವೆ ಮಾರ್ಗ ಕಾಮಗಾರಿ ಕುಂಠಿತಗೊಂಡಿದೆ... ಕಾಡುಗೊಲ್ಲ ಸಮುದಾಯವನ್ನು ಎಸ್.ಟಿಗೆ ಸೇರ್ಪಡೆ ಮಾಡುತ್ತೇವೆ ಎಂದು ಹೇಳಿದ್ದರು  ಆದರೆ ಅದರ ಬಗ್ಗೆ ಯಾವುದೇ ಮಾತಿಲ್ಲ ಎಂದು ಸಂಸದರ ಕಾರ್ಯ ವೈಖರಿಯನ್ನು ಟೀಕಿಸಿದ್ದಾರೆ.

ನಮ್ಮ ಪಕ್ಷದ ವಿಚಾರ ನಿಮಗೆ ಬೇಡ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವರೆಗೆ ಸ್ವಾಗತ ಎಂದು ಡಿ.ಕೆ.ಶಿ ಹೇಳಿದ್ದಾರೆ. ಇದು ನಮ್ಮ ಪಕ್ಷದ ಆಂತರಿಕ ವಿಷಯ ಇದರ ಬಗ್ಗೆ ನೀವು ಮಾತನಾಡುವುದು ಸರಿಯಲ್ಲ. ನೀವು ಸಂಸದರಾಗಿ ಕ್ಷೇತ್ರಕ್ಕೆ ಏನು ಮಾಡಿದ್ದೀರಾ ಎಂಬುದನ್ನು ಮತದಾರರಿಗೆ ನೀಡಿ ಎಂದು ಶಿವುಯಾದವ್ ತಿಳಿಸಿದ್ದು, ಕಾಂಗ್ರೆಸ್ ಪಕ್ಷದ ತೇಜೋವದೇ ಮಾಡುವುದನ್ನು ನಿಲ್ಲಿಸಬೇಕು, ಮೋದಿ ಮ್ತತೋಮ್ಮೆ ಪ್ರಧಾನಿಯಾಗಬೇಕೆಂದು ಯಾರು ಸಹಾ ಬಯಸುತ್ತಿಲ್ಲ, ಎಲ್ಲರು ಮೋದಿ ಸರ್ಕಾರವನ್ನು ಬೈಯುತ್ತಿದ್ದಾರೆ. ರೈತರ, ಬಡವರ, ಹಿಂದುಳಿದ ವರ್ಗಗಳ, ಕಾರ್ಮಿಕರ ಬಗ್ಗೆ ಯಾವುದೇ ಕಾಳಜಿಯನ್ನು ವಹಿಸುತ್ತಿಲ್ಲ, ಶ್ರೀಮಂತರ ಪರವಾದ ಸರ್ಕಾರ ಇದಾಗಿದೆ ಎಂದು ದೂರಿದರು.

ಕೇಂದ್ರ ಬಿಜೆಪಿಯ ಸರ್ಕಾರದ ಬಗ್ಗೆ ಜನತೆ ರೋಸಿ ಹೋಗಿದ್ದಾರೆ. ಈ ಸರ್ಕಾರವನ್ನು ಕಿತ್ತು ಹಾಕಲು ಮುಂದಾಗಿದ್ದಾರೆ. ಮೋದಿಯವರ ಮುಂದೆ ಸಚಿವರಾಗಲು ಸಂಸದರಾಗಲೀ ಯಾವುದೇ ರೀತಿಯ ಮಾತನ್ನು ಆಡದೇ ಸುಮ್ಮನೆ ಇರುತ್ತಾರೆ ಇಲ್ಲಿ ಮಾತ್ರ ಮತದಾರರಿಗೆ ಸುಳ್ಳುನ್ನು ಹೇಳುವುದರ ಮೂಲಕ ಮೋಸ ಮಾಡುತ್ತಿದ್ದಾರೆ ಎಂದ ಶಿವುಯಾದವ್, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ವಿಜ್ಹನ್ ಎಂದು ಹೇಳಿತ್ತು ಆದರೆ ಮತದಾರ 66 ಕ್ಕೆ ಇಳಿಸಿದ್ದಾನೆ, ಇದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಎಂದು ಗುರಿಯನ್ನು ಹೊಂದಿದೆ ಆದರೆ ಮತದಾರ 200 ಸದಸ್ಯ ಬಲವನ್ನು ಸಹಾ ದಾಟಲು ಬಿಡುವುದಿಲ್ಲ ಎಂದು ಭವಿಷ್ಯ ನುಡಿದರು.

ಗೋಷ್ಟಿಯಲ್ಲಿ ಚಿದಾನಂದ ಮೂರ್ತಿ ಉಪಸ್ಥಿತರಿದ್ದರು.

Advertisement
Tags :
Advertisement