Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪೊಲೀಸ್ ವಾಹನದ ಮೇಲೆ ಕಲ್ಲೆಸೆದು ಪರಾರಿಯಾಗಿದ್ದ ಕಳ್ಳರು : ಓರ್ವನನ್ನು ಬಂಧಿಸಿದ ನಾಯಕನಹಟ್ಟಿ ಪೊಲೀಸರು

09:35 AM Jul 29, 2024 IST | suddionenews
Advertisement

 

Advertisement

ಸುದ್ದಿಒನ್, ಚಳ್ಳಕೆರೆ, ಜುಲೈ.29 : ತಾಲ್ಲೂಕಿನ ಕುದಾಪುರ ಬಳಿ ಇತ್ತೀಚೆಗೆ ಪೊಲೀಸ್ ಜೀಪ್ ಮೇಲೆ ಆಂಧ್ರದ ಅನಂತಪುರ ಮೂಲದ ಕಳ್ಳರು ಕಲ್ಲೆಸೆದು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ವೆಂಕಟರಮಣ ನನ್ನು ಬಂಧಿಸಿ ಆತನಿಂದ ಟಾಟಾ ಯೋಧ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

 

Advertisement

ಇದೇ ಜುಲೈ 21ರಂದು ಕುದಾಪುರ ಬಳಿ ತಪಾಸಣೆಗೆಂದು ವಾಹನವನ್ನು ಪೊಲೀಸರು ತಡೆದರೂ ನಿಲ್ಲಿಸದೆ ಪೊಲೀಸ್ ಜೀಪ್ ಮೇಲೆ ಕಲ್ಲೆಸೆದು ಕಳ್ಳರು ಎಸ್ಕೇಪ್ ಆಗಿದ್ದರು. ಆ ವೇಳೆ ನಾಯಕನಹಟ್ಟಿ ಪಿಎಸ್ ಐ ಶಿವಕುಮಾರ್ 2 ಗುಂಡು ಗಾಳಿಯಲ್ಲಿ ಮತ್ತು 3 ಗುಂಡು ವಾಹನದತ್ತ ಹಾರಿಸಿದ್ದರು. ಆದರೆ ಚಾಲಾಕಿ ಕಳ್ಳರು ನೆರೆಯ ಆಂಧ್ರಪ್ರದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನಾಯಕನಹಟ್ಟಿ ಠಾಣೆಯ ಪಿಎಸ್ ಐ ಶಿವಕುಮಾರ್ ನೇತೃತ್ವದಲ್ಲಿ ಆರೋಪಿ ವೆಂಕಟರಮಣನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದ ಏಳು ಜನ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement
Tags :
arrestedbengaluruchitradurgaescapedNayakanahattipolicepolice vehiclesuddionesuddione newsಕಳ್ಳರುಚಿತ್ರದುರ್ಗನಾಯಕನಹಟ್ಟಿಪರಾರಿಪೊಲೀಸರುಪೊಲೀಸ್ಬೆಂಗಳೂರುವಾಹನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article