For the best experience, open
https://m.suddione.com
on your mobile browser.
Advertisement

ಊಟದ ವಿಚಾರಕ್ಕೆ ತಂದೆಯನ್ನೇ ಕೊಂದ ಮಗ..!

08:35 PM Oct 27, 2024 IST | suddionenews
ಊಟದ ವಿಚಾರಕ್ಕೆ ತಂದೆಯನ್ನೇ ಕೊಂದ ಮಗ
Advertisement

ಹಿರಿಯೂರು : ಕ್ಷುಲ್ಲಕ ಕಾರಣಕ್ಕೆ ನಡುವೆ ಜಗಳವಾಗಿದ್ದು, ಈ ಜಗಳದಿಂದ ತಂದೆಯ ಕೊಲೆಯಾಗಿರುವ ಘಟನೆ ಕುಂದಲಗುರ ಗ್ರಾಮದಲ್ಲಿ ನಡೆದಿದೆ. 50 ವರ್ಷದ ರಂಗಸ್ವಾಮಿ ಮೃತ ದುರ್ದೈವಿಯಾಗಿದ್ದಾರೆ.

Advertisement

ಕೇವಲ ಊಟದ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ ನಡೆದಿದೆ. ಎಷ್ಟೋ ಸಲ ಈ ಕೊಲೆಯ ವಿಚಾರಗಳು ತೀರಾ ಸಣ್ಣ ಪ್ರಮಾಣದ್ದೇ ಆಗಿರುತ್ತವೆ. ಹಾಗೇ ತಾಳ್ಮೆಯಿಂದ ಕೂತು ಯೋಚಿಸಿದರೆ ಮಾತ್ರ ಈ ವಿಚಾರ ಏನೇನು ಅಲ್ಲ ಅನ್ನೋದು ಅರ್ಥವಾಗುತ್ತದೆ. ಯಾವಾಗ ಕೋಪದ ಕೈಗೆ ಬುದ್ದಿ ಕೊಡುತ್ತಾರೋ ಆಗ ನೋಡಿ ಪ್ರಾಣಗಳ ಬೆಲೆಯೂ ಅಲ್ಲಿ ತಿಳಿಯಲ್ಲ, ಸಂಬಂಧಗಳು ಲೆಕ್ಕಕ್ಕೆ ಬರಲ್ಲ. ಈಗ ಈ ತಂದೆ ಮಗನ ವಿಚಾರವೂ ಹಾಗೇ. ಊಟದ ವಿಚಾರ ಕೊಲೆಯಲ್ಲಿ ಅಂತ್ಯವಾಗುವಂತ ವಿಚಾರ ಎನಿಸೋದೆ ಇಲ್ಲ.

Advertisement

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕುಂದಲಗುರ ಗ್ರಾಮದಲ್ಲಿ ರಂಗಸ್ವಾಮಿ ಹಾಗೂ ಅವರ ಮಗ ದೇವರಾಜು ವಾಸವಾಗಿದ್ದರು. ಮನೆಯಲ್ಲಿಯೇ ಊಟದ ವಿಚಾರಕ್ಕೆ ಮಾತು ಶುರುವಾಗಿದೆ. ಮಾತಿಗೆ ಮಾತು ಬೆಳೆದು ದೇವರಾಜ್ ತನ್ನ ತಂದೆ ರಂಗಸ್ವಾಮಿ ಮೇಲೆ ಹಲ್ಲೆ‌ ಮಾಡಿದ್ದಾನೆ. ಹಲ್ಲೆಯ ಪರಿಣಾಮ ರಂಗಸ್ವಾಮಿಯ ಜೀವವೇ ಹೋಗಿದೆ. ಈ ಘಟನೆ ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ‌ CPI ಗುಡ್ಡಪ್ಪ, ಹಾಗೂ ಅಬ್ಬಿನಹಹೊಳೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Advertisement

ಸದ್ಯ ಪೊಲೀಸರು ಇದರ ತನಿಖೆ ನಡೆಸಿದ್ದು, ಜಗಳಕ್ಕೂ ಮುನ್ನ ಏನಾಯ್ತು, ಮನೆಯಲ್ಲಿ ಯಾರೆಲ್ಲಾ ಇದ್ದರು ಎಂಬೆಲ್ಲಾ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಪೊಲೀಸರ ತನಿಖೆಯ ಬಳಿಕ ತಂದೆಯ ದುರಂತ ಅಂತ್ಯಕ್ಕೆ ಮಗನೇ ಕಾತಣವಾಗಿದ್ದಾರೂ ಯಾಕೆ ಎಂಬ ವಿಚಾರ ಬೆಳಕಿಗೆ ಬರಲಿದೆ. ಮೃತರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.

Advertisement

Advertisement
Tags :
Advertisement