For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದ ಎಸ್ಪಿ ಕಚೇರಿ ಎದುರು ಪ್ರೇಮಿಗಳ ಕಣ್ಣೀರು : ಯಾಕೆ ಗೊತ್ತಾ..?

12:52 PM Nov 30, 2023 IST | suddionenews
ಚಿತ್ರದುರ್ಗದ ಎಸ್ಪಿ ಕಚೇರಿ ಎದುರು ಪ್ರೇಮಿಗಳ ಕಣ್ಣೀರು   ಯಾಕೆ ಗೊತ್ತಾ
Advertisement

ಚಿತ್ರದುರ್ಗ: ಪ್ರೀತಿ ಅನ್ನೋದೇ ಹಾಗೇ. ಯಾರೇ ವಿರೋಧಿಸಿದರು ತನ್ನ ಪ್ರೀತಿಯಷ್ಟೇ ಮುಖ್ಯವಾಗುತ್ತದೆ. ಪ್ರೀತಿ ಕೈ ಮೀರುತ್ತಿದೆ ಎನ್ನುವಾಗ ಮನೆಯವರ ವಿರೋಧ ಕಟ್ಟಿಕೊಂಡರು ಚಿಂತೆ ಇಲ್ಲ ಎಂದು ಮದುವೆಯಾಗುವ ಎಷ್ಟೋ ಕೇಸ್ ಗಳು ಬೆಳಕಿಗೆ ಬಂದಿವೆ. ಇದೀಗ ಕೋಟೆನಾಡಿನಲ್ಲೂ ಅಂತಂದೊಂದು ಘಟನೆ ನಡೆದಿದೆ.

Advertisement
Advertisement

Advertisement

ಮಲ್ಲಿಕಾರ್ಜುನ ಹಾಗೂ ಕೀರ್ತಿ ಎಂಬುವವರು ಮದುವೆಯಾದ ಜೋಡಿಗಳು. ಚಳ್ಳಕೆರೆಯ ಚೊಕ್ಕಮದರೆಯವರು ಮಲ್ಲಿಕಾರ್ಜುನ. ಖಾಸಗಿ ಬಸ್ಸಿನ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಬಿಎಸ್ಸಿ ಓದುತ್ತಿರುವ ಕೀರ್ತಿ, ಹಿರಿಯೂರಿನ ಸೊಂಡೆಕೆರೆಯವರು. ಕಳೆದ ಒಂದು ವರ್ಷದಿಂದ ಇಬ್ಬರು ಪ್ರೀತಿಸುತ್ತಾ ಇದ್ದರು. ಇದೀಗ ಇಬ್ಬರು ಮದುವೆಯಾಗಿದ್ದು, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.

Advertisement

Advertisement

ಮದುವೆಯಾದ ನಾಲ್ಕೆ ದಿನಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಮ್ಮ ಮನೆಯವರು ಬದುಕುವುದಕ್ಕೆ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ನಾಲ್ಕು ದಿನಗಳ ಹಿಂದೆ‌ ಮಂಡ್ಯದ ದೇವಸ್ಥಾನ ಒಂದರಲ್ಲಿ ಈ ಜೋಡಿ ಮದುವೆಯಾಗಿತ್ತು. ನಮ್ಮ ಪೋಷಕರು ಬದುಕುವುದಕ್ಕೆ ಬಿಡುತ್ತಿಲ್ಲ, ಹೊಡಿತಿನಿ, ಬಡಿತೀನಿ ಅಂತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Tags :
Advertisement