Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೈಸೂರು ದಸರಾ ಉತ್ಸವದಲ್ಲಿ ಚಿತ್ರದುರ್ಗದ ಶ್ರೀ ವಿಜಯ ಮಹಾಂತೇಶ್ವರ ಕಲಾ ಬಳಗ ಭಾಗಿ

06:59 PM Oct 13, 2024 IST | suddionenews
Advertisement

 

Advertisement

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 13 : 2024 ನೇ ಸಾಲಿನ ವಿಶ್ವ ವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಮಹೋತ್ಸವದ ವೇದಿಕೆಗಳೊಂದಾದ ಗಾನ ಭಾರತಿ ಸಭಾಂಗಣದ ವೇದಿಕೆಯಲ್ಲಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದ ಅಪ್ಪಟ ಗ್ರಾಮೀಣ ದೇಸಿ ಪ್ರತಿಭೆ ಎಂ. ನುಂಕೇಶ್ ಸಾರಥ್ಯದ ಶ್ರೀ ವಿಜಯ ಮಹಾಂತೇಶ್ವರ ಕಲಾ ಬಳಗ ವಿವಿಧ ಗೀತೆಗಳೊಂದಿಗೆ ಯಶಸ್ವಿ ಗಾಯನ ನೆರವೇರಿಸಿ ಸೈ ಎನಿಸಿಕೊಂಡಿತು.

Advertisement

ಈ ಕಲಾ ತಂಡಕ್ಕೆ ಸದಾ ಬೆನ್ನೆಲುಬಾಗಿ ಭೋವಿ ಗುರುಪೀಠದ ಪರಮ ಪೂಜ್ಯ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿಯವರು ಹರಸಿ ಹಾರೈಸಿ ಪೋಷಿಸುತ್ತಿದ್ದಾರೆ. ಈಗಾಗಲೇ ಈ ತಂಡವು ರಾಜ್ಯ ಮತ್ತು ಹೊರ ರಾಜ್ಯದ ಮುಖ್ಯ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿ ಯಶಸ್ವಿಯಾಗಿರುತ್ತಾರೆ. ಕಲಾ ತಂಡವನ್ನು ಯಶಸ್ವಿಯಾಗಿ ಮುನ್ನಡಿಸಿಕೊಂಡು ಹೋಗುತ್ತಿರುವ ಎಂ. ನುಂಕೇಶ್ ರವರ ಕಲಾ ಸೇವೆ ಶ್ಲಾಘ ನೀಯವಾದುದ್ದು ಎಂದು ಕೆ.ಪಿ.ಸಿ.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಪ್ಪ ನೇರಲಗುಂಟೆ ರವರು ಅಭಿನಂದಿಸಿದರು.

Advertisement
Tags :
bengaluruchitradurgaMysore Dussehra festivalparticipatedSri Vijaya Mahanteshwar Kala Balagasuddionesuddione newsಚಿತ್ರದುರ್ಗಬೆಂಗಳೂರುಮೈಸೂರು ದಸರಾ ಉತ್ಸವಶ್ರೀ ವಿಜಯ ಮಹಾಂತೇಶ್ವರ ಕಲಾ ಬಳಗಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article