For the best experience, open
https://m.suddione.com
on your mobile browser.
Advertisement

ಕೆಲವರು ರಾತ್ರೋ ರಾತ್ರಿ ಬಂದು ಭೇಟಿಯಾಗುತ್ತಾರೆ : ಬಿಜೆಪಿ ನಾಯಕರ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ಎಸ್ ಟಿ ಸೋಮಶೇಖರ್

03:40 PM Jan 01, 2024 IST | suddionenews
ಕೆಲವರು ರಾತ್ರೋ ರಾತ್ರಿ ಬಂದು ಭೇಟಿಯಾಗುತ್ತಾರೆ   ಬಿಜೆಪಿ ನಾಯಕರ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ಎಸ್ ಟಿ ಸೋಮಶೇಖರ್
Advertisement

ಬೆಂಗಳೂರು: ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಭೇಟಿ ನೀಡಿದ್ದರು. ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನವೇ ಕಾಂಗ್ರೆಸ್ ನಾಯಕರ ಜೊತೆಗೆ ಎಸ್ ಟಿ ಸೋಮಶೇಖರ್ ಗುರುತಿಸಿಕೊಂಡಿದ್ದರು. ಹೀಗಾಗಿ ಮತ್ತೆ ಕಾಂಗ್ರೆಸ್ ಗಡ ಬರುತ್ತಾರಾ ಎಂಬ ಪ್ರಶ್ನೆಗಳು ಎದ್ದಿದ್ದವು. ಅದರ ನಡುವೆ ಇದೀಗ ಇಂದಿನ ಭೇಟಿ ಬಗ್ಗೆ ಸೋಮಶೇಖರ್ ಅವರೇ ಸ್ಪಷ್ಟನೆ ನೀಡಿದ್ದಾರೆ.

Advertisement
Advertisement

Advertisement

ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಎಸ್ ಟಿ ಸೋಮಶೇಖರ್ ಅವರು, ಬೆಂಗಳೂರು ನಿಮ್ಮ ನೇತೃತ್ವದಲ್ಲಿ ಅಭಿವೃದ್ಧಿ ಆಗುತ್ತಾ ಇದೆ. ನಮ್ಮ ಕ್ಷೇತ್ರದ ಕಡೆಗೂ ಸ್ವಲ್ಪ ಗಮನ ಕೊಡಿ ಎಂದು ಕೇಳಿದ್ದೇವೆ. ನಮ್ಮ ಕ್ಷೇತ್ರದ ಅಭಿವೃದ್ಧಿ ಆಗಬೇಕು ಎಂದಿದ್ದೇನೆ ಎಂದು ಮಾಹಿತಿ ನೀಡಿದರು.

Advertisement

ಇದೆ ವೇಳೆ ಬಿಜೆಪಿಯ ಬೇರೆ ನಾಯಕರು ಕೂಡ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗುತ್ತಾರಾ ಎಂಬ ಮಾತಿಗೆ ಉತ್ತರಿಸಿದ ಎಸ್ ಟಿ ಸೋಮಶೇಖರ್, ಬಿಜೆಪಿಯ ಕೆಲ ನಾಯಕರು ಕೂಡ ಡಿಕೆ ಶಿವಕುಮಾರ್ ಭೇಟಿ ಮಾಡಲು ಬರುತ್ತಾರೆ. ಕೆಲವರು ರಾತ್ರೋ ರಾತ್ರಿ ಬಂದು ಭೇಟಿಯಾಗುತ್ತಾರೆ. ಇನ್ನು ಕೆಲವರು ಮಾಧ್ಯಮದವರ ಕಣ್ಣು ತಪ್ಪಿಸಿ ಭೇಟಿಯಾಗುತ್ತಾರೆ. ಆದರೆ ನಮ್ಮದೇನು ಬ್ಲಾಕು, ವೈಟು ಇಲ್ಲ. ಹೀಗಾಗಿ ರಾಜಾರೋಷವಾಗಿ ಬರುತ್ತೀವಿ. ಕ್ಷೇತ್ರದ ವಿಚಾರಕ್ಕೆ ಬರುತ್ತೀವಿ. ಮಾತನಾಡಿ ಹೋಗುತ್ತೀವಿ‌ ಕೆಲವರು ನಾನು ಇದ್ದಾಗಲೇ ಸಾಕಷ್ಟು ಸಲ ಬಂದಿದ್ದಾರೆ. ನೀವೂ ಅವರನ್ನು ಗಮನಿಸುವುದಿಲ್ಲ.

ಬರೀ ಯಶವಂತಪುರ ಕ್ಷೇತ್ರದ ಶಾಸಕರನ್ನಷ್ಟೇ ಗುರುತಿಸುತ್ತೀರಿ ಎಂದು ಹೇಳಿದ ಎಸ್ ಟಿ ಸೋಮಶೇಖರ್, ಮಾಧ್ಯಮದವರಿಗೂ ಹಾಗೂ ನಾಡಿನ ಜನತೆಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ‌.

Advertisement
Tags :
Advertisement