For the best experience, open
https://m.suddione.com
on your mobile browser.
Advertisement

ಸಾಮಾಜಿಕ ನ್ಯಾಯದ ಪರ ಎಂದು ಹೇಳುವ ಸಿದ್ದರಾಮಯ್ಯನವರು ಹಿಂದುಳಿದ ಮಠಗಳ ಕಡೆ ಗಮನ ಕೊಡುತ್ತಿಲ್ಲ : ಪ್ರಣವಾನಂದ ಸ್ವಾಮೀಜಿ

06:36 PM Aug 13, 2024 IST | suddionenews
ಸಾಮಾಜಿಕ ನ್ಯಾಯದ ಪರ ಎಂದು ಹೇಳುವ ಸಿದ್ದರಾಮಯ್ಯನವರು ಹಿಂದುಳಿದ ಮಠಗಳ ಕಡೆ ಗಮನ ಕೊಡುತ್ತಿಲ್ಲ   ಪ್ರಣವಾನಂದ ಸ್ವಾಮೀಜಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಆಗಸ್ಟ್.13 : ಹಿಂದುಳಿದ ಮಠಗಳಿಗೆ ಸಂವಿಧಾನಬದ್ದವಾಗಿ ಸಿಗಬೇಕಾದ ಹಕ್ಕುಗಳನ್ನು ಪಡೆಯುವುದಕ್ಕಾಗಿ ಆ.18 ರಂದು ತ.ರಾ.ಸು.ರಂಗಮಂದಿರದಲ್ಲಿ ಬೃಹತ್ ಸಮಾವೇಶ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

Advertisement

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2013 ರಿಂದ 18 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಎರಡನೆ ಬಾರಿಗೆ ಈಗಲೂ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಕೆಲವು ಪ್ರಭಾವಿ ಮಠಗಳಿಗೆ ಅನುದಾನ ಸಿಗುತ್ತಿದೆಯೇ ವಿನಃ ಹಿಂದುಳಿದ ಮಠಗಳನ್ನು ಕಡೆಗಣಿಸಲಾಗುತ್ತಿದೆ.

Advertisement

ಲಂಬಾಣಿ ಸಮಾಜದ ಮಾಜಿ ಸಚಿವ ಕೆ.ಶಿವಮೂರ್ತಿನಾಯ್ಕರನ್ನು ರಾಜಕೀಯವಾಗಿ ಮೂಲೆ ಗುಂಪು ಮಾಡಲಾಗಿದೆ. ಈಡಿಗ ಸಮಾಜದ ಬಿ.ಕೆ.ಹರಿಪ್ರಸಾದ್‌ಗೂ ಯಾವ ಅಧಿಕಾರ ಸಿಕ್ಕಿಲ್ಲ. ಕೋಮುವಾದಿ ಬಿಜೆಪಿ ಜಾತಿ ಧರ್ಮದ ಮೇಲೆ ಮತ ಪಡೆದು ಅಧಿಕಾರಕ್ಕೆ ಬರುತ್ತಿದೆ. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಪರವಾಗಿದ್ದೇನೆಂದು ಹೇಳುತ್ತಿದ್ದಾರೆ. ಆದರೆ ಹಿಂದುಳಿದ ಮಠಗಳ ಕಡೆ ಗಮನ ಕೊಡುತ್ತಿಲ್ಲದಿರುವುದು ವಿಪರ್ಯಾಸ. ಹಾಗಾಗಿ ಮುಂದಿನ ನಮ್ಮ ಹೋರಾಟಗಳನ್ನು ರೂಪಿಸುವುದಕ್ಕಾಗಿ ಕರೆದಿರುವ ಸಭೆಯಲ್ಲಿ ಐದುನೂರು ಆಯ್ದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ಹೇಳಿದರು.

ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ದುರ್ಬಳಕೆಯಾಗಿದೆ. ಹಿಂದುಳಿದ ನಾಯಕರುಗಳನ್ನು ಮುಗಿಸುವ ಹುನ್ನಾರ ನಡೆಯುತ್ತಿದೆ. ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮಿಗಳು ಹಿಂದು ಧರ್ಮ ಧರ್ಮವೇ ಅಲ್ಲ ಎಂದು ಅವಹೇಳನವಾಗಿ ಮಾತನಾಡಿರುವುದು ಸರಿಯಲ್ಲ. ಕೂಡಲೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ ತುಳಿತಕ್ಕೆ ನಿರ್ಲಕ್ಷೆಗೊಳಗಾಗಿರುವವರಿಗೆ ಸಮಾಜದ ಕಟ್ಟಕಡೆಯಲ್ಲಿರುವವರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬೇರೆ ಬೇರೆ ಉದ್ದೇಶಗಳಿಗೆ ಬಳಸಿ ಈ ಜನಾಂಗವನ್ನು ಶೋಷಣೆಗೊಳಪಡಿಸುತ್ತಿದೆ. ದಲಿತರಿಗಿರುವ ದೊಡ್ಡ ಶಕ್ತಿಯನ್ನು ಕುಗ್ಗಿಸುವ ಕೆಲಸವಾಗುತ್ತಿರುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಮಾತನಾಡುತ್ತ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ತೆಗೆದುಕೊಂಡಿರುವ ಮಠಗಳೆ ಮತ್ತೆ ಮತ್ತೆ ಸರ್ಕಾರದಿಂದ ಅನುದಾನ ಕಬಳಿಸುತ್ತಿವೆ. ಹಿಂದುಳಿದ ಮಠಗಳ ಕಡೆ ಯಾವ ಸರ್ಕಾರಗಳು ತಿರುಗಿ ನೋಡದಂತಾಗಿವೆ. ಹದಿನೈದರಿಂದ ಹದಿನೆಂಟು ಸಮುದಾಯದ ಸ್ವಾಮೀಜಿಗಳು ಸೇರಿಕೊಂಡು ಸಂವಿಧಾನವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತೇವೆಂದರು.

ಕುಂಬಾರ ಸಮಾಜದ ಕುಂಬಾರ ಗುಂಡಯ್ಯ ಸ್ವಾಮೀಜಿ ಮಾತನಾಡಿ ಸರ್ಕಾರದ ಎಲ್ಲಾ ಅನುದಾನಗಳು ಸಿರಿವಂತ ಮಠಗಳ ಪಾಲಾಗುತ್ತಿದ್ದು, ಹಿಂದುಳಿದ ಮಠಗಳು ಕಷ್ಟದಲ್ಲಿವೆ. ಹಿಂದಿನಿಂದಲೂ ನಾವುಗಳು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಮಠಗಳಿಗೂ ಅನುದಾನ ಕೊಡಿ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವುದರಿಂದ ಆ.18 ರ ಪೂವಭಾವಿ ಸಭೆಗೆ ಹಿಂದುಳಿದ ಮಠಗಳ ಸ್ವಾಮೀಜಿಗಳ ಬೆಂಬಲವಿದೆ ಎಂದರು.

ಆರ್ಯ ಈಡಿಗರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ಪ್ರತಾಪ್, ತಿಪ್ಪೇಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags :
Advertisement