For the best experience, open
https://m.suddione.com
on your mobile browser.
Advertisement

ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವ : ಸೆಪ್ಟೆಂಬರ್ 25ರಿಂದ ಯೋಗ, ಆರೋಗ್ಯ ಮತ್ತು ಆಧ್ಯಾತ್ಮ ಪ್ರವಚನ : ಆಸಕ್ತರಿಗೆ ವಾಹನ ಸೌಲಭ್ಯ

09:21 AM Sep 24, 2024 IST | suddionenews
ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವ   ಸೆಪ್ಟೆಂಬರ್ 25ರಿಂದ ಯೋಗ  ಆರೋಗ್ಯ ಮತ್ತು ಆಧ್ಯಾತ್ಮ ಪ್ರವಚನ   ಆಸಕ್ತರಿಗೆ ವಾಹನ ಸೌಲಭ್ಯ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.23 : ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶರಣ ಸಂಸ್ಕೃತಿ ಉತ್ಸವದ ಪೂರ್ವಭಾವಿಯಾಗಿ ದಿ. 25-9-2024 ರಿಂದ 4-10-2024ರವರೆಗೆ 10 ದಿನಗಳ ಕಾಲ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಯೋಗ ಆರೋಗ್ಯ ಆಧ್ಯಾತ್ಮ ಶಿಬಿರವನ್ನು ಆಯೋಜಿಸಲಾಗಿದೆ.

ಯೋಗಗುರು ವೈದ್ಯಶ್ರೀ ಚನ್ನಬಸವಣ್ಣ ಶಿಬಿರವನ್ನು ನಡೆಸಿಕೊಡಲಿದ್ದು, ಈ ಎರಡೂ ವಿಶೇಷ ಕಾರ್ಯಕ್ರಮಗಳಿಗೆ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬರುವವರಿಗಾಗಿ ವಾಹನ ಸೌಕರ್ಯ ಕಲ್ಪಿಸಲಾಗಿದೆ.

Advertisement

ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ನಗರದಿಂದ ಶ್ರೀ ಮುರುಘಾಮಠಕ್ಕೆ ಬರುವವರಿಗೆ ರೂಟ್ ನಂಬರ್ 1 :- ವಿದ್ಯಾನಗರ, ತುರುವನೂರು ರಸ್ತೆಯ ವೆಂಕಟರಮಣ ದೇವಸ್ಥಾನ, ಆರ್.ಟಿ.ಓ ಕಚೇರಿ, ಚಳ್ಳಕೆರೆ ಗೇಟ್, ಐಯುಡಿಪಿ ಲೇಔಟ್ ನ ಹನ್ನೊಂದನೇ ಕ್ರಾಸ್ ನೀರಿನ ಟ್ಯಾಂಕ್, ಕೃಷ್ಣಾ ಗ್ರಾಮೀಣ ಬ್ಯಾಂಕ್, ಸ್ಟೇಡಿಯಂ ರಸ್ತೆ ಮಾರ್ಗವಾಗಿ ಜೋಗಿಮಟ್ಟಿ ರಸ್ತೆ, ಕರುವಿನಕಟ್ಟೆ ಸರ್ಕಲï, ಫಿಲ್ಟರ್ ಹೌಸ್, ಉಚ್ಚಂಗಿ ಎಲ್ಲಮ್ಮ ದೇವಸ್ಥಾನ, ಆನೆಬಾಗಿಲು ರಸ್ತೆ, ಗಾಂಧಿ ಸರ್ಕಲ್ ಮುಖಾಂತರವಾಗಿ ಶ್ರೀಮಠ ತಲುಪುತ್ತದೆ.

Advertisement

ರೂಟ್ ನಂ.2:- ಎನ್.ಹೆಚ್.-13 ಬಾಪೂಜಿ ಸ್ಕೂಲï, ಜೆಸಿಆರ್ ಸರ್ಕಲï, ಫಾರೆಸ್ಟ್ ಆಫೀಸ್, ಸಂಗಮೇಶ್ವರ ಸ್ಟೋರ್ಸ್, ಬಸವೇಶ್ವರ ಸರ್ಕಲï, ಮೆಜೆಸ್ಟಿಕ್ ಸರ್ಕಲï, ಅಂಬೇಡ್ಕರ್ ವೃತ್ತ, ಡೆಂಟಲ್ ಕಾಲೇಜು, ನೀಲಕಂಠೇಶ್ವರ ದೇವಸ್ಥಾನದ ಮುಖಾಂತರ ಶ್ರೀಮಠ ತಲಪುತ್ತದೆ.

ರೂಟ್ ನಂ:-3, ಮಾಳಪ್ಪನಹಟ್ಟಿ, ಧವಳಗಿರಿ ಬಡಾವಣೆ, ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪ, ಹೆಡ್ ಫೋಸ್ಟ್ ಆಫೀಸ್, ರೈಲ್ವೆ ಸ್ಟೇಷನ್ ರಸ್ತೆ, ಗಾರೆಹಟ್ಟಿ ಕ್ರಾಸ್‍ನಿಂದ ಶ್ರೀಮಠ ತಲುಪುತ್ತದೆ. ಕಾರ್ಯಕ್ರಮ ಮತ್ತು ವಾಹನ ಸೌಲಭ್ಯದ ಮಾಹಿತಿಗಾಗಿ ದೂ. 9980724341, 8884226676, 9740037176 ಸಂಪರ್ಕಿಸಲು ಶ್ರೀಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.

Tags :
Advertisement