For the best experience, open
https://m.suddione.com
on your mobile browser.
Advertisement

ಶಾಲೆ ಜ್ಞಾನ ದೇಗುಲ, ಮಕ್ಕಳು ದೇವರಿದ್ದಂತೆ : ಶ್ರೀಮತಿ ಶ್ವೇತಾ

02:27 PM Dec 25, 2023 IST | suddionenews
ಶಾಲೆ ಜ್ಞಾನ ದೇಗುಲ  ಮಕ್ಕಳು ದೇವರಿದ್ದಂತೆ   ಶ್ರೀಮತಿ ಶ್ವೇತಾ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
               ಸುರೇಶ್ ಪಟ್ಟಣ್,                         
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 25 :  ಶಾಲೆ ಮಕ್ಕಳಿಗೆ ಜ್ಞಾನದ ದೇಗುಲ ಇದ್ದಂತೆ. ಇಲ್ಲಿ ಕಲಿಯುವ ಮಕ್ಕಳು ದೇವರಿದ್ದಂತೆ. ಇವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ದಕ್ಷಿಣ ಕ್ಲಸ್ಟ್‌ರ್‌ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶ್ವೇತಾ ತಿಳಿಸಿದರು.

Advertisement
Advertisement

ನಗರದ ತರಾಸು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಾಸ ವಿದ್ಯಾ ಸಂಸ್ಥೆಯ 2023-24ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆ ಮಕ್ಕಳ ಅಭಿವೃದ್ದಿಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ. ಇದಕ್ಕೆ ಶಿಕ್ಷಕರು ಮತ್ತು ಪೋಷಕರು ಸಹಾಯವನ್ನು ಮಾಡಬೇಕಿದೆ. ಮಕ್ಕಳು ಸುಸಂಸ್ಕೃತವಾದ ಮತ್ತು ಗ್ರಂಥಿಕ ಭಾಷೆಯನ್ನು ಕಲಿಯಬೇಕಿದೆ. ಇದ್ದಲ್ಲದೆ ವೈಜ್ಞಾನಿಕವಾಗಿ ವ್ಯವಹಾರಿಕ ಜ್ಞಾನವನ್ನು ಸಹಾ ನೀಡಬೇಕಿದೆ. ಶಾಲಾ ಪಠ್ಯದ ಜೊತೆಗೆ ಇತರೆ ಚಟುವಟಿಕೆಗಳನ್ನು ಸಹಾ ಕಲಿಸಬೇಕಿದೆ ಇದೊಂದು ಜ್ಞಾನದ ದೇಗುಲವಾಗಿ ಮಕ್ಕಳಿಗೆ ಮಾರ್ಪಾಡಾಗಬೇಕಿದೆ ಎಂದರು.

ವಿಕಾಸ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಬಿ.ವಿಜಯಕುಮಾರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಈ ರೀತಿಯಾದ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಕರೋನದಿಂದಾಗ ಕಳೆದ ಎರಡು ವರ್ಷ ನಡೆಸಿರಲಿಲ್ಲ, ಮಕ್ಕಳು ಮತ್ತು ಪೋಷಕರು ಉತ್ಸಾಹದಿಂದ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಉತ್ತಮವಾ ಭೋದನೆಯನ್ನು ಮಾಡುವುದರ ಮೂಲಕ ಮಕ್ಕಳನ್ನು ದೇಶದ ಮುಂದಿನ ಉತ್ತಮ ಪ್ರಜೆಗಳಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿದ್ಯಾರವರು ಶಾಲಾ ವಾರ್ಷಿಕ ವರದಿಯನ್ನು ವಾಚನ ಮಾಡಿದರು. ಶಿಕ್ಷಕಿಯಾದ ಲತಾ ಸ್ವಾಗತಿಸಿದರೆ, ವಸುಂಧರ ವಂದಿಸಿದರು, ರಶ್ಮಿ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ, ನಂತರ ಮಕ್ಕಳಿಂದ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮ ನಡೆಯಿತು.

Advertisement
Tags :
Advertisement