For the best experience, open
https://m.suddione.com
on your mobile browser.
Advertisement

ಎಸ್. ಆರ್. ಎಸ್. - ಆಸ್ಕರ್ ಫೆರ್ನಾಂಡಿಸ್ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಅದ್ದೂರಿಯಾಗಿ ನೆರವೇರಿದ ದುರ್ಗಾತರಂಗ ವಾರ್ಷಿಕೋತ್ಸವ ಸಮಾರಂಭ

12:27 PM Dec 17, 2023 IST | suddionenews
ಎಸ್  ಆರ್  ಎಸ್    ಆಸ್ಕರ್ ಫೆರ್ನಾಂಡಿಸ್ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಅದ್ದೂರಿಯಾಗಿ ನೆರವೇರಿದ ದುರ್ಗಾತರಂಗ ವಾರ್ಷಿಕೋತ್ಸವ ಸಮಾರಂಭ
Advertisement

ಸುದ್ದಿಒನ್, ಚಿತ್ರದುರ್ಗ : ನಗರದ ಪ್ರತಿಷ್ಠಿತ ಎಸ್. ಆರ್. ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ನಡೆಯುತ್ತಿರುವ ಆಸ್ಕರ್ ಫೆರ್ನಾಂಡಿಸ್ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಸಂಜೆ ದುರ್ಗಾತರಂಗ-ಕಲೆಗಳ ಕಾರಂಜಿ ವಾರ್ಷಿಕೋತ್ಸವ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

Advertisement
Advertisement

ಸಮಾರಂಭದ ಮುಖ್ಯ ಅತಿಥಿಯಾಗಿ ಮಾಜಿ ಸಮಾಜ ಕಲ್ಯಾಣ ಇಲಾಖೆ ಸಚಿವರು ಮತ್ತು ಆಸ್ಕರ್ ಫೆರ್ನಾಂಡಿಸ್ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯ ಸಂಸ್ಥಾಪಕರಾದ ಹೆಚ್. ಆಂಜನೇಯ ರವರು ಭಾಗವಹಿಸಿದ್ದರು.

Advertisement

ದಾವಣಗೆರೆ ವಿಶ್ವವಿದ್ಯಾನಿಲಯದ ಡಾ. ಹೆಚ್. ವಿಶ್ವನಾಥರವರು ವಿಶೇಷ ಅತಿಥಿಯಾಗಿ ಭಾಗವಹಿಸಿ ಪೋಷಕರು ಶಾಲೆಯೊಂದಿಗೆ ಯಾವ ರೀತಿ ಭಾಂಧವ್ಯವನ್ನು ಹೊಂದಿದಾಗ ವಿದ್ಯಾರ್ಥಿಗಳ ಪ್ರಗತಿ ಕಾಣಬಹುದಾಗಿದೆ ಎಂಬುವುದನ್ನು ಬಸವಣ್ಣನವರ ವಚನಗಳ ಮೂಲಕ ಮನವರಿಕೆ ಮಾಡಿಕೊಟ್ಟರು.

Advertisement

ಸಮಾರಂಭದ ಅಧಕ್ಷತೆವಹಿಸಿ ಮಾತಾಡಿದ ಎಸ್. ಆರ್. ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಿ. ಎ. ಲಿಂಗಾರೆಡ್ಡಿರವರು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಶಾಲೆಯ ನಿಯಮಗಳನ್ನು ಪರಿಪಾಲಿಸಲು ತಿಳಿಸಿದರಲ್ಲದೇ, ಸಂಸ್ಥೆಯು ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸತತವಾಗಿ ಪ್ರಯತ್ನಿಸುತ್ತಿರುವುದನ್ನು ಹಾಗೂ ಅದರಲ್ಲಿ ಯಶಸ್ಸು ಗಳಿಸಿರುವುದನ್ನು ಪೋಷಕರ ಗಮನಕ್ಕೆ ತಂದರು.

ಪೋಷಕರು ಮತ್ತು ವಿದ್ಯಾರ್ಥಿಗಳು ಶಾಲೆಯ ನಿಯಮಾವಳಿಗಳನ್ನು ಪರಿಪಾಲಿಸಿದಲ್ಲಿ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಅವಕಾಶಗಳನ್ನು ಸಂಸ್ಥೆಯ ಮೂಲಕ ಒದಗಿಸುವುದಾಗಿ ತಿಳಿಸಿದರು.

ಈ ವಾರ್ಷಿಕೋತ್ಸವದ ಸಮಾರಂಭದಲ್ಲಿ ಎಸ್. ಆರ್. ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಪಿ ಲಿಂಗಾರೆಡ್ಡಿ ರವರು, ಉಪಾಧ್ಯಕ್ಷರಾದ  ಬಿ. ಎಲ್. ಅಮೋಘರವರು ಹಾಗೂ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ. ಟಿ. ಎಸ್. ರವಿರವರು ಉಪಸ್ಥಿತರಿದ್ದರು.

ಶಾಲೆಯ ಆಡಳಿತಧಿಕಾರಿಯಾದ ಡಾ. ಚಿನ್ಮಯ. ಸಿ. ಸಾಲಿಮಠ, ಮುಖ್ಯಶಿಕ್ಷಕಿ ಶ್ರೀಮತಿ ಕೆ. ಜೆ. ಪದ್ಮಾವತಿ ಹಾಗೂ ಸಮಸ್ತ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement
Tags :
Advertisement