For the best experience, open
https://m.suddione.com
on your mobile browser.
Advertisement

ರೇಣುಕಾಸ್ವಾಮಿ ಕೊಲೆ ಖಂಡಿಸಿ ವಿವಿಧ ಸಂಘಟನೆಗಳಿಂದ ನಾಳೆ ಚಿತ್ರದುರ್ಗದಲ್ಲಿ ಪ್ರತಿಭಟನೆ..!

08:03 PM Jun 11, 2024 IST | suddionenews
ರೇಣುಕಾಸ್ವಾಮಿ ಕೊಲೆ ಖಂಡಿಸಿ ವಿವಿಧ ಸಂಘಟನೆಗಳಿಂದ ನಾಳೆ ಚಿತ್ರದುರ್ಗದಲ್ಲಿ ಪ್ರತಿಭಟನೆ
Advertisement

Advertisement

ಸುದ್ದಿಒನ್, ಚಿತ್ರದುರ್ಗ, ಜೂ.11 : ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಕಾರಣಕ್ಕೆ ಬಡ ಕುಟುಂಬದ ವ್ಯಕ್ತಿಯನ್ನೇ ಕೊಂದಿದ್ದಾರೆ. ಒಬ್ಬ ಗರ್ಭಿಣಿ ಗಂಡನನ್ನ ಬಲಿ ತೆಗೆದುಕೊಂಡಿದ್ದಾರೆ. ವಯಸ್ಸಾದ ತಂದೆ ತಾಯಿಯನ್ನು ಸಾಕಬೇಕಾದ ಮಗನನ್ನ ಹತ್ಯೆ ಮಾಡಿದ್ದಾರೆ. ಆ ರೇಣುಕಾಸ್ವಾಮಿ ಅದ್ಯಾಕೆ ಮೆಸೇಜ್ ಮಾಡಿದನೋ..? ಇತ್ತ ಆ ಪವಿತ್ರಾ ಗೌಡಳಿಗೆ ಬ್ಲಾಕ್ ಮಾಡುವ ಆಪ್ಶನ್ ಇತ್ತು, ಪೊಲೀಸರಿಗೆ ದೂರು ನೀಡುವ ಅವಕಾಶವಿತ್ತು. ಆದರೆ ಈ ವಿಚಾರ ಹೋಗಿದ್ದೇ ಬೇರೆಡೆಗೆ, ತೆಗೆದುಕೊಂಡ ತಿರುವೇ ಬೇರೆ. ಒಟ್ನಲ್ಲಿ ಕಮೆಂಟ್ ವಿಚಾರ ಕೊಲೆಯಲ್ಲಿ ಅಂತ್ಯವಾಯ್ತು. ಈ ಕೊಲೆಯನ್ನು ಖಂಡಿಸಿ ನಾಳೆ ಚಿತ್ರದುರ್ಗದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ವಿವಿಧ ಸಂಘಟನೆಗಳು ಈ ಪ್ರತಿಭಟನೆಗೆ ಸಾಥ್ ನೀಡಿವೆ.

Advertisement

ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಜಂಗಮ ಸಮುದಾಯ ಸೇರಿದಂತೆ ಹಲವು ಸಮುದಾಯಗಳು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿವೆ. ಚಿತ್ರದುರ್ಗದ ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಲಿದ್ದು, ಬಳಿಕ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ರೇಣುಕಾ ಸ್ವಾಮಿ ಮುಗ್ಧನಾಗಿದ್ದು ಆತನ ಕೊಲೆಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸುತ್ತಿವೆ. ಹೀಗಾಗಿ‌ ನಾಳೆ ಚಿತ್ರದುರ್ಗದಲ್ಲಿ  ಪ್ರತಿಭಟನೆ ನಡೆಸಲಿದ್ದಾರೆ.

Advertisement

ರೇಣುಕಾ ಸ್ವಾಮಿ ಅಪೋಲೋ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಸ್ವಾಮಿ ದರ್ಶನ್ ಅವರ ಅಭಿಮಾನಿ ಅಂತ ಕೂಡ ಹೇಳಲಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಗಳನ್ನು ಮಾಡುತ್ತಿದ್ದ ಕಾರಣಕ್ಕೆ ಚಿತ್ರದುರ್ಗದಿಂದ ಆತನನ್ನು ಕರೆಸಿ, ಕಾಮಾಕ್ಷಿಪಾಳ್ಯದ ವಿನಯ್ ಗೆ ಸಂಬಂಧಿಸಿದ ಶೆಡ್ ನಲ್ಲಿ ಹೊಡೆದು, ಮೋರಿಯಲ್ಲಿ ಬಿಸಾಕಿದ್ದರು.

Advertisement
Advertisement

Advertisement
Tags :
Advertisement