Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯೂರು ಪೊಲೀಸರ ಕಾರ್ಯಾಚರಣೆ | ಗಾಂಜಾ ವಶ, ಐವರ ಬಂಧನ

05:47 PM Nov 30, 2023 IST | suddionenews
Advertisement

 

Advertisement

ಸುದ್ದಿಒನ್, ಹಿರಿಯೂರು, ನವೆಂಬರ್.30 : ನಗರ  ಪೊಲೀಸರು ಕಾರ್ಯಾಚರಣೆ ನಡೆಸಿ 150 ಗ್ರಾಂ ಗಾಂಜಾ ವಶಪಡಿಸಿಕೊಂಡು ಬಿಕಾಂ ವಿದ್ಯಾರ್ಥಿ ಸೇರಿದಂತೆ  ಐವರನ್ನು ಬಂಧಿಸಿದ್ದಾರೆ.

ನಗರದ ನಿವಾಸಿ ಆರೋಪಿಗಳಾದ
1). ಬಿಲಾಲ್ (21) ,
2). ಶ್ರೀನಿವಾಸ ( 24),
3). ಗೌತಮ್ (19)
4).  ಬಿಕಾಂ ವಿದ್ಯಾರ್ಥಿ ಸುದೀಪ್ ನಾಯಕ (21) ಹಾಗೂ
5). ವೆಂಕಟೇಶ (28) ವರ್ಷ ಬಂಧಿತ ಆರೋಪಿಗಳು.

Advertisement

ಬಂಧಿತ ಆರೋಪಿಗಳು ನಗರದ ಚಳ್ಳಕೆರೆ ರಸ್ತೆಯ ಶಿವಮೂರ್ತಿ ನಗರದ ಬಳಿ ಗಾಂಜಾ ಸೇವಿಸಿ, ಬೈಕ್ ಗಳಲ್ಲಿ ವಿಲ್ಲಿಂಗ್ ಮಾಡಿಕೊಂಡು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಬೈದಾಡಿ, ತೊಂದರೆ ಕೊಡುತ್ತಿದ್ದರು.

ಮಾಹಿತಿ ತಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಮತ್ತು ಬರುವ ಪದಾರ್ಥವನ್ನು ಸೇವಿಸಿರುವ ಬಗ್ಗೆ ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ನಗರ ಪೊಲೀಸ್ ಠಾಣೆ ಪಿಎಸ್ಐ ಮಂಜುನಾಥ್,  ಸಿಬ್ಬಂದಿಗಳಾದ ಮಾರುತೇಶ್ , ದೇವೇಂದ್ರಪ್ಪ, ಸುದರ್ಶನ್ ಗೌಡ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

Advertisement
Tags :
chitradurgafeaturedsuddioneಕಾರ್ಯಾಚರಣೆಗಾಂಜಾಚಿತ್ರದುರ್ಗಪೊಲೀಸರುಬಂಧನವಶಹಿರಿಯೂರು
Advertisement
Next Article