For the best experience, open
https://m.suddione.com
on your mobile browser.
Advertisement

ಎಸ್‍ಜೆಎಂ  ಫಾರ್ಮಸಿ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

06:21 PM Jan 12, 2024 IST | suddionenews
ಎಸ್‍ಜೆಎಂ  ಫಾರ್ಮಸಿ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.12  : ದೇಶದ ಏಕತೆಗೆ ಮತ್ತು ಅಭಿವೃದ್ಧಿಗೆ ಯುವಶಕ್ತಿಗೆ ಸ್ವಾಮಿವಿವೇಕಾನಂದರ ಮೂಲಮಂತ್ರ "ಏಳಿ ಎದ್ದೇಳಿ ಎಚ್ಚರಗೊಳ್ಳಿ ಮತ್ತು ಗುರಿಯನ್ನು ತಲುಪುವವರೆಗೆ ನಿಲ್ಲಬೇಡಿ. ವಿದ್ಯಾರ್ಥಿ ಜೀವನದಲ್ಲಿ ಮುಂದೆ ಬರಲು ಮತ್ತು ದೇಶವನ್ನು ಸುಭದ್ರವಾಗಿ ಕಟ್ಟಲು ಇದೊಂದು ಸಂದೇಶ ಸಾಕು ಎಂದು

Advertisement
Advertisement

ರೆಡ್ ಕ್ರಾಸ್ ಸಮಿತಿಯ ಕಾರ್ಯದರ್ಶಿ ಮಜುರುಲ್ಲಾ ಹೇಳಿದರು.

Advertisement

ನಗರದ ಎಸ್‍ಜೆಎಂ  ಫಾರ್ಮಸಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಅವರ 161ನೇ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

Advertisement

ನಂತರ ಪ್ರಾಂಶುಪಾಲ ಡಾ. ಟಿ. ಎಸ್. ನಾಗರಾಜ್ ಅವರು ಮಾತನಾಡಿ,  ಯುವ ಜನತೆಗೆ ಜಾಗೃತರಾಗಿ ನೀವು ಓದುತ್ತಿರುವ ಗುರಿಯನ್ನು ತಲುಪಿ ಕಾಲೇಜಿಗೆ ಮತ್ತು ರಾಷ್ಟ್ರಕ್ಕೆ ಆಸ್ತಿಯಾಗಿ ಬೆಳೆಯಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಯುವ ದಿನದ ಅಂಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.

ಮೊದಲ ಬಹುಮಾನವನ್ನು ಪೂಜಾ ಬಿ ಸಿ ಎಂ ಫಾರ್ಮ ಎರಡನೇ ಬಹುಮಾನವನ್ನು ನೇಹಾ ಯು ಎಂ ಫಾರ್ಮ ಡಿ ಹಾಗೂ ತೃತೀಯ ಬಹುಮಾನವನ್ನು ಬಿ ಕೀರ್ತಿ ಬಿ ಫಾರ್ಮ ವಿದ್ಯಾರ್ಥಿಗಳು ಬಹುಮಾನವನ್ನು ಪಡೆದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಚೈತ್ರ ಮತ್ತು ಸಂಗಡಿಗರು ಹಾಡಿದರು. ಸ್ವಾಗತವನ್ನು  ಶಮಂತಕ ಮಣಿ, ವಂದನಾರ್ಪಣೆಯನ್ನು ಕಿರಣï ಹಾಗೂ ನಿರ್ವಹಣೆಯನ್ನು ಚಂದನ್ ಎಂ ಫಾರ್ಮಾ ವಿದ್ಯಾರ್ಥಿಗಳು ನೆರವೇರಿಸಿದರು.

Advertisement
Tags :
Advertisement