ಮೊಳಕಾಲ್ಮೂರು | ತಾಯಿಯನ್ನು ಕೊಂದ ಮಗ : ಕಾರಣ ಏನು ಗೊತ್ತಾ ?
02:22 PM Nov 26, 2023 IST | suddionenews
Advertisement
ಸುದ್ದಿಒನ್, ಚಿತ್ರದುರ್ಗ, ನವೆಂಬರ್.26 : ಕುಡಿಯಲು ಹಣ ಕೊಡಲಿಲ್ಲವೆಂದು ಮಗನೊಬ್ಬ ತಾಯಿಯನ್ನು ಹತ್ಯೆ ಮಾಡಿದ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ.
Advertisement
ಅಂಜಿನಮ್ಮ (58) ಕೊಲೆಯಾದ ದುರ್ದೈವಿ. ಶಿವಾರೆಡ್ಡಿ (37) ಕೊಲೆ ಮಾಡಿದ ಪಾಪಿ ಮಗ. ಆರೋಪಿ ಶಿವಾರೆಡ್ಡಿ ಕಳೆದ 10 ವರ್ಷಗಳಿಂದ ಮಧ್ಯವ್ಯಸನಿಯಾಗಿದ್ದ. ಪ್ರತಿನಿತ್ಯವೂ ಹಣಕ್ಕಾಗಿ ತಾಯಿಯೊಂದಿಗೆ ಜಗಳವಾಡುತ್ತಿದ್ದ. ನಿನ್ನೆ (ಶನಿವಾರ) ರಾತ್ರಿ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement