For the best experience, open
https://m.suddione.com
on your mobile browser.
Advertisement

ಶಾಸಕ ಟಿ.ರಘುಮೂರ್ತಿಗೆ ನಿಗಮ ಮಂಡಳಿ ಬದಲಾಗಿ ಸಚಿವ ಸ್ಥಾನ ನೀಡಿ :  ಕರುನಾಡ ವಿಜಯಸೇನೆ ಒತ್ತಾಯ

04:06 PM Jan 27, 2024 IST | suddionenews
ಶಾಸಕ ಟಿ ರಘುಮೂರ್ತಿಗೆ ನಿಗಮ ಮಂಡಳಿ ಬದಲಾಗಿ ಸಚಿವ ಸ್ಥಾನ ನೀಡಿ    ಕರುನಾಡ ವಿಜಯಸೇನೆ ಒತ್ತಾಯ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.27 : ಚಳ್ಳಕೆರೆ ಕ್ಷೇತ್ರದಿಂದ ಸತತವಾಗಿ ಮೂರನೆ ಬಾರಿಗೆ ಗೆದ್ದು ಅಭಿವೃದ್ದಿಯ ಹರಿಕಾರ ಎಂದೆ ಹೆಸರುಗಳಿಸಿರುವ ಟಿ.ರಘುಮೂರ್ತಿಗೆ ನಿಗಮ ಮಂಡಳಿ ಸ್ಥಾನಕ್ಕೆ ಬದಲಾಗಿ ಸಚಿವ ಸ್ಥಾನ ನೀಡಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು.

Advertisement

ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2018 ರ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಐದು ಕಡೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಚಳ್ಳಕೆರೆಯ ಏಕೈಕ ಶಾಸಕರಾಗಿ ಕಾಂಗ್ರೆಸ್‍ನ ಮರ್ಯಾದೆ ಕಾಪಾಡಿದ ಶಾಸಕ ಟಿ.ರಘುಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಲ್ಲದ ಊಟ ಕೊಟ್ಟಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಕೆ.ಟಿ.ಶಿವಕುಮಾರ್ ಜಿಲ್ಲೆಯ ನಾಡಿಮಿಡಿತ ಗೊತ್ತಿರುವ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ಸಿಗಬೇಕೆಂದು ಆಗ್ರಹಿಸಿದರು.

ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಕಾರ್ಯದರ್ಶಿ ಜಗದೀಶ್ ಸಿ. ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಎಸ್. ನಗರಾಧ್ಯಕ್ಷ ಅವಿನಾಶ್ ಎಸ್. ರಾಜಣ್ಣ, ಪ್ರದೀಪ, ಹರೀಶ್, ಸುರೇಶ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Advertisement
Tags :
Advertisement