For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದಲ್ಲಿ ನಾಳೆ ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶ : ಹಲವು ಗಣ್ಯರು ಭಾಗಿ

05:39 PM Dec 17, 2023 IST | suddionenews
ಚಿತ್ರದುರ್ಗದಲ್ಲಿ ನಾಳೆ ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶ   ಹಲವು ಗಣ್ಯರು ಭಾಗಿ
Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.17 :  ಜಿಲ್ಲೆಯ ಮಾದಿಗ, ಸಮಗಾರ, ಮೋಚಿ, ಡೋರ್, ಡಕ್ಕಲಿಗ, ಬಂಗಿ, ಇತ್ಯಾದಿ ಮಾದಿಗ ಸಮಾಜದವರಿಂದ 

Advertisement
Advertisement

ಡಿಸೆಂಬರ್ 18 ರ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ತ.ರಾ.ಸು. ರಂಗಮಂದಿರದಲ್ಲಿ ಜಿಲ್ಲಾ ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶವನ್ನು  ಆಯೋಜಿಸಲಾಗಿದೆ.

Advertisement

Advertisement
Advertisement

ಈ ಸಮಾವೇಶದ ದಿವ್ಯ ಸಾನಿಧ್ಯವನ್ನು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವಹಿಸುವರು. ಉದ್ಘಾಟನೆಯನ್ನು ಮಾಜಿ ಸಚಿವ ಗೋವಿಂದ ಕಾರಜೋಳ ಮಾಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಮತ್ತು ದುರ್ಯೋಧನ ಐಹೊಳೆ ಭಾಗವಹಿಸುವರು. ಅಧ್ಯಕ್ಷತೆಯನ್ನು ಪ್ರೊ. ಲಿಂಗಣ್ಣ ವಹಿಸಿವರು.

ಈ ಕಾರ್ಯಕ್ರಮದಲ್ಲಿ ಲಕ್ಷ್ಮಿ ನಾರಾಯಣ, ಗುರುನಾಥ ಕೆ.ದಾನಪ್ಪನವರ್, ಪಡಿಯಪ್ಪ ಹೆಚ್. ಪೂಜಾರ್, ಬಿ.ಆರ್. ಮುನಿರಾಜು, ಸಿದ್ದು ಮೇತ್ರಿ, ಸಾಬು ದೊಡ್ಮನೆ ಸೇರಿದಂತೆ ಮಾದಿಗ ಜಾತಿಗಳ ಪ್ರಮುಖರು, ಯುವಕರು, ಚಿಂತಕರು, ವಿದ್ಯಾರ್ಥಿಗಳು ಹಾಗೂ ಹೋರಾಟಗಾರರು, ವಿವಿಧ ಸಂಘ ಸಂಸ್ಥೆ ಮುಖಂಡರು, ವಿವಿಧ ಪಕ್ಷಗಳ ರಾಜಕೀಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ :
ಪರಶುರಾಮ ಮುದ್ದಾಪುರ, ಮೊ : 8892604340

Advertisement
Tags :
Advertisement